ADVERTISEMENT

ಹಳ್ಳಿಯವರು ಎರಡನೇ ದರ್ಜೆ ನಾಗರಿಕರಂತೆ ಬದುಕುವ ದುಃಸ್ಥಿತಿ ಇದೆ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 3:47 IST
Last Updated 5 ಮಾರ್ಚ್ 2020, 3:47 IST
   

ಬೆಂಗಳೂರು: ‘ಹಳ್ಳಿಯ ಜನ ಎರಡನೇ ದರ್ಜೆ ಪ್ರಜೆಗಳಂತೆ ಬದುಕುವ ದುಃಸ್ಥಿತಿ ದೇಶದಲ್ಲಿದೆ. ಗಾಂಧೀಜಿ ಕನಸು ಕಂಡಗ್ರಾಮ ಸ್ವರಾಜ್‌ ಏನಾಯ್ತು? ಎಷ್ಟು ಹಳ್ಳಿಗಳು ಒಳ್ಳೆಯದಾಗಿವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನವಿಡೀ ಶ್ರಮಪಟ್ಟು ದುಡಿಯುವವನು ದಿನದ ಕೊನೆಯಲ್ಲಿ ₹144 ಕೂಲಿ ಪಡೆದರೆ, ಐದು ನಿಮಿಷಗಳಲ್ಲಿ ಕೈಚಳಕದ ಕೆಲಸ ಮಾಡಿ ₹50 ಸಾವಿರ ಗಳಿಸುವವರೂ ಇದ್ದಾರೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಸೇರಿದಂತೆ ಎಲ್ಲ ಕಡೆಯಲ್ಲೂ ಹಣಕ್ಕಾಗಿ ದುರಾಸೆ ಮೇರೆ ಮೀರಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT