ಕೊಪ್ಪಳ: ತಾಲ್ಲೂಕಿನಹನುಮನಹಟ್ಟಿಯಲ್ಲಿ 60 ಎಕರೆಯಲ್ಲಿ50ಕ್ಕೂ ಹೆಚ್ಚು ರೈತರು ಕನಕಾಂಬರ ಬೆಳೆದಿದ್ದಾರೆ. ಮಾರುಕಟ್ಟೆಯಿಲ್ಲದೇ ಹೂವುಗಳ ಗಿಡದಲ್ಲೇ ಬಾಡುತ್ತಿವೆ.
ಎರಡು ತಿಂಗಳಿನಿಂದ ಹೂವು ಕೊಳ್ಳುವವರು ಇಲ್ಲ. ಹೂವುಗಳು ಗಿಡದಲ್ಲಿಯೇ ಅರಳಿ ಭೂಮಿ ಪಾಲಾಗುತ್ತಿವೆ.
‘ನಿತ್ಯ 6 ಕೆ.ಜಿ.ಯಷ್ಟು ಹೂವು ಬಿಡಿಸಿ ಪ್ರತಿ ಕೆ.ಜಿ ಗೆ ₹250ಕ್ಕೆ ಮಾರುತ್ತಿದ್ದೇವು. 1 ಕೆ.ಜಿ ಹೂವು ಬಿಡಿಸಲು ₹ 100 ಕೂಲಿ ನೀಡುತ್ತಿದ್ದೆವು. ಈಗಿನ ಸ್ಥಿತಿಯಲ್ಲಿ ನಮಗಷ್ಟೇ ಅಲ್ಲ, ಕೂಲಿಯವರಿಗೂ ಸಂಕಷ್ಟ ಎದುರಾಗಗಿದೆ’ ಎನ್ನುತ್ತಾರೆ ಈ ರೈತರು.
'ಒಂದು ಎಕರೆಯಲ್ಲಿ ಹೂವು ಬೆಳೆದಿದ್ದೇನೆ. ₹ 1 ಲಕ್ಷ ಆದಾಯ ನಿರೀಕ್ಷಿಸಿದ್ದೆ. ಈಗ ಗ್ರಾಹಕರಿಲ್ಲದೆ ಹೊಲದಲ್ಲೇ ಬಿಟ್ಟಿದ್ದೇನೆ' ಎನ್ನುತ್ತಾರೆ ರೈತ ಪರಮೇಶ್ವರಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.