ADVERTISEMENT

ಕನಕಪುರ: ಜೆಡಿಎಸ್ ಮುಖಂಡ ಆರ್‌.ಟಿ.ರಾಜಗೋಪಾಲ್‌ ಹತ್ಯೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 4:59 IST
Last Updated 13 ನವೆಂಬರ್ 2018, 4:59 IST
ಆರ್‌.ಟಿ. ರಾಜಗೋಪಾಲ್‌
ಆರ್‌.ಟಿ. ರಾಜಗೋಪಾಲ್‌   

ಕನಕಪುರ: ಜಾತ್ಯತೀತ ಜನತಾದಳದ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಟಿ. ರಾಜಗೋಪಾಲ್‌ ಅವರನ್ನು ದುಷ್ಕರ್ಮಿಗಳು ಇಲ್ಲಿನ ಜನನಿ ಆಸ್ಪತ್ರೆ ಸಮೀಪ ಸೋಮವಾರ ಸಂಜೆ ಇರಿದು ಕೊಲೆ ಮಾಡಿದ್ದಾರೆ.

ರಾಜ್‌ಗೋಪಾಲ್ ಅಂಗಡಿಯೊಂದರ ಮುಂದೆ ಟೀ ಕುಡಿಯುತ್ತ ನಿಂತಿದ್ದ ವೇಳೆ ಮೂವರು ದುಷ್ಕರ್ಮಿಗಳು ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದಾರೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಕನಕಪುರ ಟೌನ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.