ADVERTISEMENT

'ನಿನ್ನಂಥೋರ್ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೆ': ಇಂದು ಪುನೀತ್‌ಗೆ ರಂಗನಮನ

ಪುನೀತ್ ರಾಜ್‌ಕುಮಾರ್‌ಗೆ ಸಾಹಿತಿ- ಕಲಾವಿದರ ರಂಗನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2021, 1:17 IST
Last Updated 21 ನವೆಂಬರ್ 2021, 1:17 IST
'ನಿನ್ನಂಥೋರ್ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೆ' ರಂಗನಮನ
'ನಿನ್ನಂಥೋರ್ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೆ' ರಂಗನಮನ   

ಬೆಂಗಳೂರು: ಅಕಾಲದಲ್ಲಿ ಅಗಲಿದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಸಾಹಿತಿ, ಕಲಾವಿದರು ಭಾನುವಾರ ಸಂಜೆ (ನ.21) ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ನಮನ ಸಲ್ಲಿಸಲಿದ್ದಾರೆ.

'ನಿನ್ನಂಥೋರ್ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೆ' ಶೀರ್ಷಿಕೆಯಲ್ಲಿ, ಸಂಜೆ 4.30ರಿಂದ ನೆನಪಿನ ನುಡಿ, ರಂಗಗೀತೆ ಹಾಗೂ ಇಂಪು ಸಂಗೀತ ಸಂಸ್ಥೆಯಿಂದ ನೆನಪಿನ ಹಾಡುಗಳ ಗಾಯನ ನಡೆಯಲಿದೆ.

ಕಾರ್ಯಕ್ರಮದಲ್ಲಿ ಜಸ್ಟೀಸ್ ಎ.ಜೆ.ಸದಾಶಿವ, ಬರಗೂರು ರಾಮಚಂದ್ರಪ್ಪ, ಹೆಚ್. ಎಸ್.ಶಿವಪ್ರಕಾಶ್, ಬಿ.ಜಯಶ್ರೀ, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ಗಿರಿಜಾ ಲೋಕೇಶ್, ಪ್ರಕಾಶ್ ರಾಜ್, ಅರುಂಧತಿ ನಾಗ್, ಪ್ರಕಾಶ್ ಬೆಳವಾಡಿ, ದತ್ತಣ್ಣ, ಉಮಾಶ್ರೀ, ಬಿ.ಸುರೇಶ್, ಜಯರಾಮ್ ರಾಯಪುರ, ಸುಧಾ ಬೆಳವಾಡಿ, ಟಿ.ಎಸ್.ನಾಗಾಭರಣ, ಎಂ.ಎಸ್.ಮೂರ್ತಿ ಭಾಗವಹಿಸಲಿದ್ದಾರೆ.

ADVERTISEMENT

ಸಾಹಿತಿ ಮತ್ತು ಕಲಾವಿದರ ವೇದಿಕೆ ಹಾಗೂ ರಂಗವಿಜಯ ಸಹಯೋಗದಲ್ಲಿ, ಶ್ರೀನಿವಾಸ್ ಜಿ ಕಪ್ಪಣ್ಣ ಸಂಚಾಲಕತ್ವದಲ್ಲಿ ಶಶಿಧರ್ ಭಾರಿಘಾಟ್, ಸಿ.ಕೆ.ಗುಂಡಪ್ಪ, ಮಾಲೂರು ವಿಜಿ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ (fb.com/Prajavani.net) ನೇರ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.