ADVERTISEMENT

ಎಣ್ಣೆಹೊಳೆ ನದಿಯಲ್ಲಿ ಮುಳುಗಿ ಇಸ್ರೊ ನಿವೃತ್ತ ವಿಜ್ಞಾನಿ ಎಸ್.ಸಿ.ರತ್ನಾಕರ ಸಾವು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 19:31 IST
Last Updated 4 ಮಾರ್ಚ್ 2021, 19:31 IST
ಎಸ್.ಸಿ.ರತ್ನಾಕರ
ಎಸ್.ಸಿ.ರತ್ನಾಕರ   

ತೀರ್ಥಹಳ್ಳಿ: ತಾಲ್ಲೂಕಿನ ಬಸವಾನಿ ಸಮೀಪ ಶುಂಠಿಕಟ್ಟೆ ಗ್ರಾಮದವರಾದ ಇಸ್ರೊದ ನಿವೃತ್ತ ವಿಜ್ಞಾನಿ
ಎಸ್.ಸಿ. ರತ್ನಾಕರ (64) ಬುಧವಾರ ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟರು.

ರತ್ನಾಕರ ಅವರು ಅವಿವಾಹಿತರಾಗಿದ್ದು, ಕಾರ್ಕಳ ಬೈಲೂರು ರಾಮಕೃಷ್ಣಾಶ್ರಮದಲ್ಲಿ ತಂಗಿದ್ದರು. ತುಂಗಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು ಕಾಲೇಜಿನ ಶೈಕ್ಷಣಿಕ ಸಲಹಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು.

ADVERTISEMENT

ತಾಲ್ಲೂಕಿನ ಶುಂಠಿಕಟ್ಟೆಯಲ್ಲಿ ಗುರುವಾರ ರತ್ನಾಕರ ಅವರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.