ಬೆಂಗಳೂರು: ಬಿಜೆಪಿ ಸರ್ಕಾರದ 17 ಮಂದಿ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದ್ದು ಆದೇಶ ಹೊರಡಿಸುವಂತೆ ರಾಜಭವನಕ್ಕೆ ಶಿಫಾರಸು ಮಾಡಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಪಟ್ಟಿಯನ್ನು ಸೋಮವಾರ ಬೆಳಿಗ್ಗೆ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಆಗಸ್ಟ್ 20ರಂದು 17 ಮಂದಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಖಾತೆ ಹಂಚಿಕೆಯ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಸಂಭಾವ್ಯ ಪಟ್ಟಿ ಹೀಗಿದೆ:
ಸಚಿವರು ಮತ್ತುಖಾತೆ
* ಗೋವಿಂದ ಕಾರಜೋಳ – ಲೋಕೋಪಯೋಗಿ
* ಅಶ್ವತ್ಥ ನಾರಾಯಣ – ಬೆಂಗಳೂರು ಅಭಿವೃದ್ಧಿ ಮತ್ತು ಗೃಹ
* ಲಕ್ಷ್ಮಣ ಸವದಿ – ಸಹಕಾರ
* ಕೆ.ಎಸ್.ಈಶ್ವರಪ್ಪ– ಸಮಾಜ ಕಲ್ಯಾಣ
* ಆರ್.ಅಶೋಕ - ಕಂದಾಯ
* ಜಗದೀಶ್ ಶೆಟ್ಟರ್ – ಬೃಹತ್ ಕೈಗಾರಿಕೆ
* ಶ್ರೀರಾಮುಲು – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಎಸ್.ಸುರೇಶ್ ಕುಮಾರ್ – ಉನ್ನತ ಶಿಕ್ಷಣ
* ವಿ.ಸೋಮಣ್ಣ – ವಸತಿ ಮತ್ತು ನಗರಾಭಿವೃದ್ಧಿ
* ಸಿ.ಟಿ ರವಿ – ಗ್ರಾಮೀಣಾಭಿವೃದ್ಧಿ
* ಬಸವರಾಜ ಬೊಮ್ಮಾಯಿ – ಇಂಧನ
* ಕೋಟ ಶ್ರೀನಿವಾಸ ಪೂಜಾರಿ – ಬಂದರು ಮತ್ತು ಮೀನುಗಾರಿಕೆ
* ಜಿ.ಸಿ ಮಾಧುಸ್ವಾಮಿ – ಕಾನೂನು ಮತ್ತು ಸಂಸದೀಯ
* ಚಂದ್ರಕಾಂತ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ
* ಎಚ್. ನಾಗೇಶ್ – ತೋಟಗಾರಿಕೆ
* ಪ್ರಭು ಚೌಹಾಣ್ – ಪೌರಾಡಳಿತ
* ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.