ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರಿಗೆ ಸವಾಲೆಸೆದ ಕರ್ನಾಟಕ ಬಿಜೆಪಿ 

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 7:54 IST
Last Updated 19 ಫೆಬ್ರುವರಿ 2020, 7:54 IST
ಬಿಜೆಪಿ ಟ್ವೀಟ್
ಬಿಜೆಪಿ ಟ್ವೀಟ್    

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರಿಗೆ ಬಿಜೆಪಿ ಕರ್ನಾಟಕ ರಾಜ್ಯ ಘಟಕ ಸವಾಲು ಎಸೆದಿದೆ. ಪೌರತ್ವ ಕಾಯ್ದೆ ಯಾವ ರೀತಿ ಭಾರತೀಯರನ್ನು ಬಾಧಿಸುತ್ತದೆ ಎಂದು ಹೇಳಿ ಎಂಬುದು ರಾಜ್ಯ ಬಿಜೆಪಿಯ ಟ್ವೀಟ್.

ಸಿಎಎಯನ್ನು ವಿರೋಧಿಸುವವರೇ, ಈ ಮಾನವತಾವಾದಿ ಕಾಯ್ದೆಯಿಂದ ಬಾಧಿತರಾಗಿರುವ ಭಾರತದ ಪ್ರಜೆಗಳ ಪಟ್ಟಿಯನ್ನು ಕೊಡಿ.ಅದರ ಜತೆಗೆ ಈ ಕಾಯ್ದೆ ಯಾವ ರೀತಿಯಲ್ಲಿ ಅವರನ್ನು ಬಾಧಿಸಿದೆ ಎಂಬುದನ್ನೂ ಉಲ್ಲೇಖಿಸಿ. ನಿಮಗೆ ಅಂತಾ ಒಂದು ಹೆಸರನ್ನು ಕೂಡಾ ನೀಡಲು ಸಾಧ್ಯವಾಗುವುದಿಲ್ಲ ಎಂದು ಸವಾಲು ಹಾಕುತ್ತಿದೇವೆ ಎಂದು ಬಿಜೆಪಿ ಬುಧವಾರ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT