ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ 60 ವರ್ಷ ತುಂಬಿದ ಪ್ರಯುಕ್ತ ಷಷ್ಟ್ಯಬ್ದಿ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಇದೇ ಹಿನ್ನೆಲೆಯಲ್ಲಿ ಶುಕ್ರವಾರ ಜೆ.ಪಿ.ನಗರದ ನಿವಾಸದಲ್ಲಿ ಶಾಸಕರ ಸಭೆ ಹಮ್ಮಿಕೊಂಡಿದ್ದಾರೆ.
ಸೋಲಿನಿಂದ ಕಂಗೆಟ್ಟುಪಕ್ಷ ಪುನಶ್ಚೇತನಗೊಳ್ಳಲು ಎಂತಹ ಕ್ರಮ ಕೈಗೊಳ್ಳಬೇಕು ಎಂಬ ಸಮಾಲೋಚನೆಗಿಂತಲೂ, ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಈ ಸಭೆ ಮಹತ್ವ ನೀಡಲಿದೆ ಎಂದು ಹೇಳಲಾಗಿದೆ.
ಷಷ್ಟ್ಯಬ್ದ ಪೂಜೆ ಮೂಲಕ ಕಷ್ಟದಿಂದ ಪಾರಾಗಲು ಎಚ್ಡಿಕೆ ಮುಂದಾಗಿದ್ದು, ಇದೀಗ ಚುನಾವಣೆ ಸೋಲಿನ ಆಘಾತದಿಂದಲೂ ಅವರು ಸುಧಾರಿಸುತ್ತಿದ್ದಾರೆ. ಅನಾರೋಗ್ಯದಿಂದಲೂ ಬಹುತೇಕ ಚೇತರಿಸಿಕೊಳ್ಳುತ್ತಿದ್ದಾರೆ.
ಇದೇ 16ರಂದು ಕುಮಾರಸ್ವಾಮಿ ಅವರ ಜನ್ಮದಿನ ನಡೆಯಲಿದ್ದು, ಷಷ್ಟ್ಯಬ್ದ ಅದೇ ದಿನ ನಡೆಯಲಿದೆ. ಜ್ಯೋತಿಷಿಗಳ ಸಲಹೆ ಮೇರೆಗೆ ಶುಕ್ರವಾರದಿಂದಲೇ ಷಷ್ಟ್ಯಬ್ದ ಸಮಾರಂಭಕ್ಕೆ ಮೊದಲಾಗಿ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಇದನ್ನೂ ಓದಿ...ರಾಮನಗರಕ್ಕೆ ಅನ್ಯಾಯ ಮಾಡಬೇಡಿ: ಎಚ್ಡಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.