ADVERTISEMENT

ಮೈತ್ರಿ ನಾಯಕರಿಂದ ಪ್ರಜಾತಂತ್ರಕ್ಕೆ‌ ಅಗೌರವ; ಬಂಡತನದ ಸಿಎಂ ಅಧಿಕಾರ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 14:25 IST
Last Updated 18 ಜುಲೈ 2019, 14:25 IST
   

ಬೆಂಗಳೂರು:ಪ್ರಜಾತಂತ್ರಕ್ಕೆ‌ ಅಗೌರವ ‌ತೋರುವ ರೀತಿಯಲ್ಲಿ ಮೈತ್ರಿ ‌ನಾಯಕರು‌ ನಡೆದುಕೊಂಡಿದ್ದಾರೆ. ವಿನಾಕಾರಣ ‌ಸದನದ‌‌‌ ಕಾಲಹರಣ ಮಾಡಿ‌ ಸರ್ಕಾರ ‌ಉಳಿಸುವ ಪ್ರಯತ್ನ ನಡೆದಿದೆ ಎಂದು ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಆಪಾದಿಸಿದರು.

ಗುರುವಾರದ ಕಪಾಲ ಅಂತ್ಯವಾದ ಬಳಿಕ, ಸುದ್ದಿಗಾರರೊಟ್ಟಿಗೆ ಮಾತನಾಡಿ, ರಾಜ್ಯಪಾಲರು ಸ್ಪೀಕರ್‌ಗೆ ಸಂದೇಶ‌ ಕಳುಹಿಸಿದ್ದರು. ಅದಕ್ಕೆ‌ ನಾವು ರೂಲಿಂಗ್ ನೀಡಲು‌ ಕೇಳಿದ್ದರೂ ಪ್ರಯೋಜನವಾಗಲಿಲ್ಲ. ಬಹುಮತ ಇಲ್ಲದಿದ್ದರೂ ರಾಜೀನಾಮೆ ನೀಡದೆ ಬಂಡತನದಿಂದ ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ಟೀಕಿಸಿದರು.

ನಾವು 105 ಶಾಸಕರಿದ್ದೇವೆ. ಈ ಸರ್ಕಾರಕ್ಕೆ ಬಹುಮತವಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರನ್ನು ಪ್ರಚೋದಿಸುವ ಕೆಲಸ ಮಾಡಲಾಗಿದೆ. ನಾವೆಲ್ಲ ಶಾಸಕರು ಇಡೀ ‌ರಾತ್ರಿ ಸದನದಲ್ಲಿ ‌ಧರಣಿ ಮಾಡುತ್ತೇವೆ ಎಂದು ತಮ್ಮ ನಿರ್ಧಾರವನ್ನು ಯಡಿಯೂರಪ್ಪ ತಿಳಿಸಿದರು.

ADVERTISEMENT

ಮೈತ್ರಿ ಸರ್ಕಾರ ವರ್ಗಾವಣೆ ದಂಧೆ ಮಾಡಿ‌ ಲೂಟಿ ಮಾಡಿದೆ. ಕುಮಾರಸ್ವಾಮಿ ಏಕೆ‌ ಕಡತಗಳನ್ನು‌ ವಿಲೇವಾರಿ ಮಾಡುತ್ತಿದ್ದಾರೆ. ಬಹುಮತ ಇಲ್ಲದಿದ್ದರೂ ಅಧಿಕಾರ ‌ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆಪಾದಿಸಿದರು.

‘‌ಸುಪ್ರೀಂ‌ಕೋರ್ಟ್ ಆದೇಶವನ್ನು ಪಾಲಿಸಲು ಸರ್ಕಾರ ವಿಳಂಬ ಮಾಡುತ್ತಿದೆ.‌ ರಾಜೀನಾಮೆ‌ ವಿಚಾರದಲ್ಲಿ ‌ಸುಪ್ರೀಂಕೋರ್ಟ ಸ್ಪಷ್ಟ ನಿರ್ದೇಶನ ನೀಡಿದೆ’ ಎಂದು ಬಿಜೆಪಿ ಶಾಸಕರ ಮಾಧುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.