ADVERTISEMENT

ವಿಶ್ವಾಸಮತ ಯಾಚನೆ | ಕಲಾಪಕ್ಕೆ ಬರಿಗಾಲಲ್ಲಿ ವಿಧಾನಸೌಧಕ್ಕೆ ಬಂದ ರೇವಣ್ಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 11:10 IST
Last Updated 18 ಜುಲೈ 2019, 11:10 IST
   

ಬೆಂಗಳೂರು:ಜೆಡಿಎಸ್‌–ಕಾಂಗ್ರೆಸ್‌ನ ಅತೃಪ್ತರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತ ಮೈತ್ರಿ ನಾಯಕರು ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಕಸರತ್ತು ನಡೆಸುತ್ತಿದ್ದಾರೆ. ವಿಶ್ವಾಸಮತದ ಮೇಲಿನ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ಕಲ್ಪಿಸಿದ್ದಾರೆ.

ಒಂದೆಡೆ ಎಲ್ಲಾ ನಾಯಕರಿಗೆ ಅವರದ್ದೇ ಆದ ಟೆನ್ಷನ್‌ ಇದ್ದೇ ಇರುತ್ತೆ. ಆದರೆ, ಮೈತ್ರಿ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಡಿ.ರೇವಣ್ಣ ಅವರು ಕಲಾಪಕ್ಕೆ ಬರಿ ಕಾಲಲ್ಲಿ ಬಂದಿದ್ದು, ಗಮನ ಸೆಳೆದಿದ್ದಾರೆ.

ವಿಧಾನಸೌಧಕ್ಕೆ ಸಚಿವರುಬರಿಗಾಲಲ್ಲಿ ಬಂದ ವಿಡಿಯೊವನ್ನು ಎಎನ್‌ಐ ಟ್ವೀಟ್‌ ಮಾಡಿದೆ.

ADVERTISEMENT

ರೇವಣ್ಣ ಅವರು ನಿಂಬೆಹಣ್ಣು ಹಿಡಿದು ಸುದ್ದಿಯಾಗಿದ್ದರು. ಹಲವು ಬಾರಿ ಬರಿಗಾಲಲ್ಲಿ ದೇಗುಲಗಳಿಗೆ ಭೇಟಿ ನೀಡಿದ್ದ ಹಾಗೂ ಸದನಕ್ಕೆ ಬರಿಗಾಲಲ್ಲಿ ಬಂದು ಸುದ್ದಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.