ADVERTISEMENT

ಶಿವಸ್ವಾಮಿ ಕೆಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 16:31 IST
Last Updated 26 ಆಗಸ್ಟ್ 2023, 16:31 IST
ಕೆಎಎಸ್‌ ಅಧಿಕಾರಿಗಳ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಸಿ.ಎಲ್‌.ಶಿವಕುಮಾರ್, ಕೆ.ಚನ್ನಬಸಪ್ಪ, ಬಿ.ಶಿವಸ್ವಾಮಿ, ಆರತಿ ಆನಂದ್‌, ಸಿ.ಮದನ್‌ ಮೋಹನ್‌.
ಕೆಎಎಸ್‌ ಅಧಿಕಾರಿಗಳ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಸಿ.ಎಲ್‌.ಶಿವಕುಮಾರ್, ಕೆ.ಚನ್ನಬಸಪ್ಪ, ಬಿ.ಶಿವಸ್ವಾಮಿ, ಆರತಿ ಆನಂದ್‌, ಸಿ.ಮದನ್‌ ಮೋಹನ್‌.    

ಬೆಂಗಳೂರು: ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿ ಬಿ.ಶಿವಸ್ವಾಮಿ ಆಯ್ಕೆಯಾಗಿದ್ದಾರೆ.

ಕೆ.ಚನ್ನಬಸಪ್ಪ (ಉಪಾಧ್ಯಕ್ಷ), ಸಿ.ಎಲ್‌.ಶಿವಕುಮಾರ್ (ಕಾರ್ಯದರ್ಶಿ), ಸಿ.ಮದನ್‌ ಮೋಹನ್‌ (ಜಂಟಿ ಕಾರ್ಯದರ್ಶಿ), ಆರತಿ ಆನಂದ್‌ (ಖಜಾಂಜಿ) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಆ.26ರಂದು ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT