ADVERTISEMENT

ಮೂಲಭೂತವಾದಿಗಳ ಸುರಕ್ಷಿತ ತಾಣವಾಗುತ್ತಿದೆ ಕೇರಳ: ಕೇಂದ್ರ ಸಚಿವ ರಾಜೀವ್‌ ಆರೋಪ

ಪಿಟಿಐ
Published 28 ಜುಲೈ 2022, 15:00 IST
Last Updated 28 ಜುಲೈ 2022, 15:00 IST
ರಾಜೀವ್‌ ಚಂದ್ರಶೇಖರ್‌
ರಾಜೀವ್‌ ಚಂದ್ರಶೇಖರ್‌   

ನವದೆಹಲಿ: ಎಡಪಕ್ಷಗಳು ಆಳ್ವಿಕೆ ನಡೆಸುತ್ತಿರುವ ಕೇರಳ ರಾಜ್ಯವು ಮೂಲಭೂತವಾದಿಗಳ ‘ಸುರಕ್ಷಿತ ತಾಣ’ವಾಗುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಗುರುವಾರ ಆರೋಪಿಸಿದ್ದಾರೆ.

‘ಕರ್ನಾಟಕದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಅವರ ಹಂತಕರು ಕೇರಳ ನೋಂದಣಿಯ ಬೈಕ್‌ ಅನ್ನು ಬಳಸಿರುವುದು ಸಾಕ್ಷ್ಯಗಳಿಂದ ಬಹಿರಂಗಗೊಂಡಿದೆ. ಆರೋಪಿಗಳ ಪತ್ತೆಗೆ ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರ್ಕಾರವು ಸಹಕಾರ ನೀಡಬೇಕು ಎಂದೂ ಹೇಳಿದ್ದಾರೆ.

‘ಪಿಎಫ್‌ಐ ಮತ್ತು ಎಸ್‌ಡಿಪಿಐಯಂತಹ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಮೂಲಭೂತವಾದಿಗಳಿಗೆ ಅಲ್ಲಿ ರಕ್ಷಣೆ ಸಿಗುವುದರಿಂದ ಇಂತಹ ಬರ್ಬರ ಹತ್ಯೆಗಳನ್ನು ನಡೆಸುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.