ADVERTISEMENT

ಉಡ ನುಂಗಲು ಯತ್ನಿಸಿದ ಕಾಳಿಂಗ ಸರ್ಪ 

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 16:25 IST
Last Updated 11 ಸೆಪ್ಟೆಂಬರ್ 2022, 16:25 IST
   

ಶಿರಸಿ: ಕಾಳಿಂಗ ಸರ್ಪವೊಂದು ದೊಡ್ಡ ಗಾತ್ರದ ಉಡವನ್ನು ನುಂಗಲು ಯತ್ನಿಸಿದ ಘಟನೆ ತಾಲ್ಲೂಕಿನ ಗಡಿಭಾಗವಾದ ಯಾಣ ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾಳಿಂಗ ಸರ್ಪ ಉಡವನ್ನು ನುಂಗಲು ಯತ್ನಿಸಿ ವಿಫಲಾಗಿದೆ. ಉಡದ ಗಾತ್ರದೊಡ್ಡದಾದ್ದರಿಂದ ಹಾಗೂ ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ನುಂಗಲಾಗದೇ ಅರ್ಧ ನುಂಗಿದ ಉಡವನ್ನು ವಾಪಸ್ ಹೊರಹಾಕಿದೆ. ಹಾವಿನ ಬೇಟೆ ಯತ್ನಕ್ಕೆ ಸಿಲುಕಿದ ಉಡವೂ ಸಾವನ್ನಪ್ಪಿದೆ.

ರಸ್ತೆಯ ಪಕ್ಕದಲ್ಲಿ ಹಾವು ಉಡ ನುಂಗುತ್ತಿರುವುದನ್ನು ಗಮನಿಸಿದ್ದ ಬೈಕ್ ಸವಾರ ಮತ್ತಿಘಟ್ಟದ ಅನಂತಮೂರ್ತಿ ಭಟ್ಟ ಈ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.