ಕಲಬುರಗಿ: ಸಿಐಟಿಯು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆಯಾಗಿ ಲಕ್ಷ್ಮಿದೇವಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮಾಲಿನಿ ಮೇಸ್ತಾ ಆಯ್ಕೆಯಾಗಿದ್ದಾರೆ.
ಎಸ್.ವರಲಕ್ಷ್ಮಿ ಗೌರವಾಧ್ಯಕ್ಷೆ, ಮಹಾದೇವಮ್ಮ–ಖಜಾಂಚಿ, ಯಮುನಾ –ಕಾರ್ಯದರ್ಶಿ ಮತ್ತು ಸಿದ್ದಮ್ಮ ಅವರು ಉಪಾಧ್ಯಕ್ಷೆಯಾಗಿದ್ದಾರೆ.
ಬುಧವಾರ ಸಮಾರೋಪಗೊಂಡ ಸಂಘದ 5ನೇ ರಾಜ್ಯ ಸಮ್ಮೇಳನದ ಬಳಿಕ ರಾಜ್ಯ ಸಮಿತಿಗೆ ಅಲ್ಲದೇ ಜಿಲ್ಲಾವಾರು ಸಮಿತಿಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಕ್ಷರ ದಾಸೋಹ ನೌಕರರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು, ಬೇಸಿಗೆ ಮತ್ತು ರಜೆ ಸಭೆಗಳನ್ನು ನೀಡಿ ಆ ದಿನಗಳ ಭತ್ಯೆ ಕೊಡಬೇಕು, ಹೆರಿಗೆ ರಜೆ, ಹೆರಿಗೆ ಭತ್ಯೆ ನೀಡುವುದು ಸೇರಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಹೋರಾಟ ರೂಪಿಸುವ ಬಗ್ಗೆ ನಿರ್ಧರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.