ADVERTISEMENT

ತಿಪಟೂರಿನಲ್ಲಿ ಲಾರಿ–ಕಾರು ಡಿಕ್ಕಿ, ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 8:27 IST
Last Updated 6 ಜುಲೈ 2018, 8:27 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ತುಮಕೂರು: ತಿಪಟೂರು ತಾಲ್ಲೂಕು ಕೆ.ಬಿ. ಕ್ರಾಸ್ ಹತ್ತಿರ ಹಿಂಡಸಗೇರಿ ಬಳಿ ಗುರುವಾರ ರಾತ್ರಿ ಲಾರಿ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ವಿನಯ್‌ಕುಮಾರ್(22), ತುಮಕೂರು ಜಿಲ್ಲೆ ಶಿರಾ ಬರಗೂರು ಗ್ರಾಮದ ತಿಪ್ಪೇಸ್ವಾಮಿ(40), ಬೆಂಗಳೂರಿನ ಅರವಿಂದ್(32) ಮೃತಪಟ್ಟವರು.

ಬೆಂಗಳೂರಿನ ದಿವಾಕರ್ ಎಂಬುವರಿಗೆ ತೀವ್ರ ಗಾಯಗಳಾಗಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ADVERTISEMENT

ಎಲ್ಲರೂ ಬಾಸ್ಕೊ ಕಂಪೆನಿಯ ತಂತ್ರಜ್ಞರಾಗಿದ್ದು, ಶಿವಮೊಗ್ಗದಲ್ಲಿ ಸಹೋದ್ಯೋಗಿ ತಿಪ್ಪೇಸ್ವಾಮಿ ಅವರ ಮದುವೆ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಕಿಬ್ಬನಹಳ್ಳಿ ಠಾಣೆ ಸಬ್ ಇನ್‌ಸ್ಪೆಕ್ಟರ್ ರಾಮ್‌ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.