ADVERTISEMENT

VIDEO: ಡಿ.ಕೆ.‌ ಶಿವಕುಮಾರ್ ಜತೆ ಮಧು ಬಂಗಾರಪ್ಪ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 9:51 IST
Last Updated 12 ಮಾರ್ಚ್ 2021, 9:51 IST
ಸದಾಶಿವನಗರದ ಶಿವಕುಮಾರ್ ನಿವಾಸದಲ್ಲಿ ಇಬ್ಬರ ಭೇಟಿ
ಸದಾಶಿವನಗರದ ಶಿವಕುಮಾರ್ ನಿವಾಸದಲ್ಲಿ ಇಬ್ಬರ ಭೇಟಿ   

ಬೆಂಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಸೊರಬ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿಮಾಡಿ ಸಮಾಲೋಚನೆ ನಡೆಸಿದರು.

ಸದಾಶಿವನಗರದ ಶಿವಕುಮಾರ್ ಅವರ ನಿವಾಸದಲ್ಲಿ ಇಬ್ಬರ ಭೇಟಿ ನಡೆಯಿತು.

ಮಧು ಬಂಗಾರಪ್ಪ ಅವರ ಕೆಲವು ಬೆಂಬಲಿಗರೂ ಜತೆಗಿದ್ದರು.

ADVERTISEMENT

'ನಾನು ಈಗಿನಿಂದಲೇ ಕಾಂಗ್ರೆಸಿಗ. ಅಧಿಕೃತವಾಗಿ ಪಕ್ಷ ಸೇರುವುದಷ್ಟೇ ಬಾಕಿ ಇದೆ' ಎಂದು ಮಧು ಬಂಗಾರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.