ರಾಮನಗರ: ಸದ್ಯ ಈಗ ಎಲ್ಲೆಲ್ಲೂ ಮಂಡ್ಯ ರಾಜಕೀಯದ್ದೇ ಮಾತು. ನೆರೆಯ ಲೋಕಸಭಾ ಕ್ಷೇತ್ರದ ರಾಜಕಾರಣದ ಕಾವು ಇಲ್ಲಿಗೂ ತಟ್ಟತೊಡಗಿದೆ.
ಬಿಡದಿಯ ಎಸ್.ಪಿ. ಕಲ್ಯಾಣ ಮಂಟಪದಲ್ಲಿ ಸೋಮವಾರ ಜೋಡಿಯೊಂದು ವೈವಾಹಿಕ ಬದುಕಿಗೆ ಕಾಲಿರಿಸಿದ್ದು, ಈ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಪರ ಮತ ಚಲಾಯಿಸುವಂತೆ ಕೋರಿ ಗಮನ ಸೆಳೆದಿದೆ. ರೇಷ್ಮಾ ಹಾಗೂ ನಾಗರಾಜು ದಂಪತಿ ಬೈಕ್ ಏರಿ ಫೋಟೊ ಸೆಷನ್ ನಡೆಸಿದ್ದು, ಈ ಸಂದರ್ಭ ಸುಮಲತಾ ಪರ ಘೋಷಣೆ ಕೂಗುವುದನ್ನು ಗೆಳೆಯರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.