ADVERTISEMENT

ಮಹಾಮಜ್ಜನದ ಧಾರ್ಮಿಕ ವಿಧಿ ಸಂಪನ್ನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 17:04 IST
Last Updated 14 ಸೆಪ್ಟೆಂಬರ್ 2018, 17:04 IST
ಶ್ರವಣಬೆಳಗೊಳದ ವಿಂಧ್ಯಗಿರಿ ಬಾಹುಬಲಿ ಬೆಟ್ಟದಲ್ಲಿ ಶುಕ್ರವಾರ ಜಯಮಂಗಲ ಮಹೋತ್ಸವದಲ್ಲಿ ಬಾಹುಬಲಿಗೆ ಅರಿಸಿನ ಅಭಿಷೇಕ ನಡೆಯಿತು
ಶ್ರವಣಬೆಳಗೊಳದ ವಿಂಧ್ಯಗಿರಿ ಬಾಹುಬಲಿ ಬೆಟ್ಟದಲ್ಲಿ ಶುಕ್ರವಾರ ಜಯಮಂಗಲ ಮಹೋತ್ಸವದಲ್ಲಿ ಬಾಹುಬಲಿಗೆ ಅರಿಸಿನ ಅಭಿಷೇಕ ನಡೆಯಿತು   

ಶ್ರವಣಬೆಳಗೊಳ: ವೈರಾಗ್ಯಮೂರ್ತಿ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ವಿಸರ್ಜನೆಯ ಧಾರ್ಮಿಕ ವಿಧಿಗಳು ಶುಕ್ರವಾರ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸಂಪನ್ನಗೊಂಡವು.

ಮೂರ್ತಿಗೆ ಪಂಚಾಮೃತ ಅಭಿಷೇಕಗಳಾದ ಎಳನೀರು, ಈಕ್ಷುರಸ, ಕ್ಷೀರ, ಕಲ್ಕಚೂರ್ಣ, ಅರಿಸಿನ, ಕಷಾಯ, ಶ್ರೀಗಂಧ, ಮಲಯಾದ್ರಿ ಚಂದನ, ಕೇಸರಿ, ಚಂದನ, ಅಷ್ಟಗಂಧ, ಪುಷ್ಪವೃಷ್ಟಿ ನೆರವೇರಿಸಲಾಯಿತು. ಜೊತೆಗೆ ಪ್ರತಿಷ್ಠಾಪಿಸಲ್ಪಟ್ಟಿದ್ದ 24 ತೀರ್ಥಂಕರರಿಗೂ ಏಕ ಕಾಲದಲ್ಲಿ ಅಭಿಷೇಕ ನಡೆಯಿತು.

ಸಾನಿಧ್ಯ ವಹಿಸಿದ್ದ ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ‘ಲೋಕ ಕಲ್ಯಾಣಾರ್ಥ ಆಯೋಜಿಸಿದ್ದ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಯಿತು’ ಎಂದರು.

ADVERTISEMENT

ಇದರೊಂದಿಗೆ 7 ತಿಂಗಳಿಂದ ನಡೆದ 21ನೇ ಶತಮಾನದ ದ್ವಿತೀಯ ಮಹಾಮಸ್ತಕಾಭಿಷೇಕಕ್ಕೆ ತೆರೆಬಿತ್ತು. ಮುಂದಿನ ಮಹಾಮಸ್ತಕಾಭಿಷೇಕ 2030ಕ್ಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.