ADVERTISEMENT

ಮಲಪ್ರಭಾ-ತುಂಗಭದ್ರಾ ನದಿ ಜೋಡಣೆ ಕಾರ್ಯಸಾಧುವಲ್ಲ: ಕೇಂದ್ರ ಜಲಶಕ್ತಿ ಸಚಿವಾಲಯ

ನಾಲ್ಕು ನದಿಗಳ ಜೋಡಣೆಯಿಂದ ಹಿಂದಕ್ಕೆ ಸರಿದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
<div class="paragraphs"><p>ತುಂಗಭದ್ರಾ ಅಣೆಕಟ್ಟೆ&nbsp;</p></div>

ತುಂಗಭದ್ರಾ ಅಣೆಕಟ್ಟೆ 

   

ನವದೆಹಲಿ: ಮಲಪ್ರಭಾ-ತುಂಗಭದ್ರಾ ಹಾಗೂ ಆಲಮಟ್ಟಿ-ಮಲಪ್ರಭಾ ನದಿಗಳ ಜೋಡಣೆ ಕಾರ್ಯಸಾಧು ಅಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ. 

ರಾಜ್ಯಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಲಹರ್‌ ಸಿಂಗ್‌ ಸಿರೊಯಾ ಪ್ರಶ್ನೆಗೆ ಉತ್ತರಿಸಿರುವ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್‌ ಭೂಷಣ್‌ ಚೌಧರಿ, ‘ಭದ್ರಾ-ವೇದಾವತಿ, ಬರಪೊಳೆ-ಕಾವೇರಿ ನದಿಗಳ ಜೋಡಣೆ ಪ್ರಸ್ತಾವದಿಂದ ರಾಜ್ಯ ಸರ್ಕಾರ ಹಿಂದಕ್ಕೆ ಸರಿದಿದೆ’ ಎಂದರು. 

ADVERTISEMENT

ಬೇಡ್ತಿ-ವರದಾ ನದಿಗಳ ಜೋಡಣೆಗೆ ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದೆ. ಅಘನಾಶಿನಿ-ವೇದಾವತಿ ನದಿಗಳ ಜೋಡಣೆಗೆ ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಅಟಲ್‌ ಭೂಜಲಕ್ಕೆ ₹903.21 ಕೋಟಿ: 

ಅಟಲ್‌ ಭೂಜಲ ಯೋಜನೆಯಡಿ ಕರ್ನಾಟಕಕ್ಕೆ ಈವರೆಗೆ ₹903.21 ಕೋಟಿ ಬಿಡುಗಡೆ ಮಾಡಲಾಗಿದೆ. ಅಂತರ್ಜಲ ನಿರ್ವಹಣೆಗೆ ಕೇಂದ್ರ ಅಂತರ್ಜಲ ಮಂಡಳಿಯಿಂದ ರಾಜ್ಯಕ್ಕೆ ₹34.32 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ವಿವರ ನೀಡಿದರು. 

ನಾರಾಯಣಪುರ ಎಡದಂಡೆ ಕಾಲುವೆ ಅಭಿವೃದ್ಧಿಗೆ ₹929 ಕೋಟಿ: 
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರದ ಪಾಲಿನ ರೂಪದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಅಭಿವೃದ್ಧಿ ಯೋಜನೆಗೆ ₹929.40 ಕೋಟಿ ಬಿಡುಗಡೆಗೊಳಿಸಲಾಗಿದೆ. ಇದರಿಂದ 99.70 ಸಾವಿರ ಹೆಕ್ಟೇರ್‌ಗೆ ನೀರಾವರಿ ಒದಗಿಸಲು ಅನುಕೂಲವಾಗುತ್ತದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.