ADVERTISEMENT

ರಾಷ್ಟ್ರೀಯ ಸ್ಮಾರಕವಾಗುವತ್ತ ‘ಮಾನಗಡ ಧಾಮ’

ಬುಡಕಟ್ಟು ಸಮುದಾಯದ 1,500 ಜನರ ಹತ್ಯಾಕಾಂಡವಾಗಿದ್ದ ಸ್ಥಳ

ಪಿಟಿಐ
Published 1 ನವೆಂಬರ್ 2022, 21:15 IST
Last Updated 1 ನವೆಂಬರ್ 2022, 21:15 IST
ಮಾನಗಡ ಧಾಮ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಪಾಲ್ಗೊಂಡಿದ್ದರು  – ಪಿಟಿಐ ಚಿತ್ರ
ಮಾನಗಡ ಧಾಮ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಪಾಲ್ಗೊಂಡಿದ್ದರು  – ಪಿಟಿಐ ಚಿತ್ರ   

ಮಾನಗಡ (ರಾಜಸ್ಥಾನ):ಬ್ರಿಟಿಷರು 1913ರಲ್ಲಿ 1,500 ಬುಡಕಟ್ಟು ಜನರನ್ನು ಗುಂಡಿಟ್ಟು ಹತ್ಯೆ ಮಾಡಿದ ಮಾನಗಡ ಧಾಮ್‌ ರಾಷ್ಟ್ರೀಯ ಸ್ಮಾರಕವಾಗುವತ್ತ ಹೆಜ್ಜೆ ಇಟ್ಟಿದ್ದು, ರಾಜಸ್ಥಾನದ ಜತೆಗೆ ಗುಜರಾತ್‌, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾನಗಡ ಧಾಮ್‌ನ ಸಮಗ್ರ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ.

ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿರುವ ಮಾನಗಡ ಧಾಮವು ಗುಜರಾತ್‌, ಮಧ್ಯಪ್ರದೇಶದ ಗಡಿಗಳಿಗೆ ಸಮೀಪದಲ್ಲಿದೆ. ಮಂಗಳವಾರ ಇಲ್ಲಿಗೆ ಭೇಟಿ ನೀಡಿದ ಪ್ರಧಾನಿ ಹುತಾತ್ಮ ಬುಡಕಟ್ಟು ಸಮುದಾಯದವರನ್ನು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT