ADVERTISEMENT

ಸಚಿವ ಅಶೋಕ ಪಿ.ಎ ಮಾತೃ ಇಲಾಖೆಗೆ ವರ್ಗ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 16:17 IST
Last Updated 26 ಜನವರಿ 2021, 16:17 IST
ಸಚಿವ ಆರ್‌ ಅಶೋಕ
ಸಚಿವ ಆರ್‌ ಅಶೋಕ    

ಬೆಂಗಳೂರು: ಶೃಂಗೇರಿ ತಾಲ್ಲೂಕು ಉಪ ನೋಂದಣಾಧಿಕಾರಿ ಎಚ್‌.ಎಸ್‌. ಚೆಲುವರಾಜು ಅವರಿಂದ ಹಣ ಕೇಳಿದ ಆರೋಪ ಎದುರಿಸುತ್ತಿರುವ ಕಂದಾಯ ಸಚಿವ ಆರ್‌. ಅಶೋಕ ಅವರ ಆಪ್ತ ಸಹಾಯಕ ಗಂಗಾಧರ್‌ ಅವರನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಹಣ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಠಾಣೆಯಲ್ಲಿ ಚೆಲುವರಾಜು ದೂರು ನೀಡಿದ್ದರು. ಗಂಗಾಧರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ವಿಧಾನಸೌಧದ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್, ಅಶೋಕ ಅವರ ಆಪ್ತ ಸಹಾಯಕ ಆಗಿ ನೇಮಕಗೊಂಡಿದ್ದರು. ಹಣ ಕೇಳಿದ ಆರೋಪ ಕಾರಣ ಗಂಗಾಧರ್‌ ಅವರನ್ನು ಮಾತೃ ಇಲಾಖೆಗೆ ಅಶೋಕ ವಾಪಸು ಕಳುಹಿಸಿದ್ದಾರೆ.

ಜ. 24ರಂದು ಚಿಕ್ಕಮಗಳೂರು ಪ್ರವಾಸವನ್ನು ಅಶೋಕ ಕೈಗೊಂಡಿದ್ದರು. ಅಂದು ಬೆಳಿಗ್ಗೆ ಅಶೋಕ ಅವರ ಆಪ್ತ ಸಹಾಯಕ ಎಂದು ಕರೆ ಮಾಡಿದ್ದ ಗಂಗಾಧರ್‌, ಹಣ ಕೀಳಲು ಯತ್ನಿಸಿದ್ದರು’ ಎಂದು ದೂರಿಲ್ಲಿ ಚೆಲುವರಾಜು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.