ADVERTISEMENT

ಯಡಿಯೂರಪ್ಪನವರನ್ನೇ ಇಳಿಸಿದವರು ವಿಜಯೇಂದ್ರನ ಬಿಡುತ್ತಾರಾ: ಮಂಕಾಳ ವೈದ್ಯ ಲೇವಡಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2023, 11:14 IST
Last Updated 17 ನವೆಂಬರ್ 2023, 11:14 IST
<div class="paragraphs"><p>ಸಚಿವ ಮಂಕಾಳ ವೈದ್ಯ</p></div>

ಸಚಿವ ಮಂಕಾಳ ವೈದ್ಯ

   

ಕಾರವಾರ: 'ಬಿ.ಎಸ್.ಯಡಿಯೂರಪ್ಪ ಅವರನ್ನೇ ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿಯ ಕೆಲವು ರಾಜ್ಯ ನಾಯಕರು ಅವರ ಮಗ ಬಿ.ವೈ.ವಿಜಯೇಂದ್ರನನ್ನೂ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸದೆ ಬಿಡುತ್ತಾರಾ?' ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಲೇವಡಿಯಾಗಿ ಪ್ರಶ್ನಿಸಿದರು.

'ನಮಗೆ ಪ್ರಬಲ ವಿರೋಧ ಪಕ್ಷ ಬೇಕು ಎಂಬ ನಿರೀಕ್ಷೆ ಇದೆ. ಹೀಗಾಗಿ ನಾವು ವಿಜಯೇಂದ್ರ ಆಯ್ಕೆ ಬಗ್ಗೆ ಟೀಕೆ, ಟಿಪ್ಪಣಿ ಮಾಡುವುದಿಲ್ಲ. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಒಪ್ಪಿಕೊಳ್ಳಲು ಅವರ ಪಕ್ಷದಲ್ಲೇ ಕೆಲವರು ತಯಾರಿಲ್ಲ. ಅವರೇ ವಿಜಯೇಂದ್ರ ಅವರನ್ನೂ ಹುದ್ದೆಯಿಂದ ಇಳಿಸುತ್ತಾರೆ' ಎಂದು ಶುಕ್ರವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ADVERTISEMENT

'ಹಿಂದೆ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಹಿನ್ನಡೆ ಅನುಭವಿಸಿದೆವು. ಈ ಬಾರಿ ಬಿಜೆಪಿಗೆ ಅಂತದ್ದೇ ಸ್ಥಿತಿ ಬರಲಿದೆ' ಎಂದೂ ಟೀಕಿಸಿದರು.

'ಎಚ್.ಡಿ.ಕುಮಾರಸ್ವಾಮಿ ಈಗ ಕೆಲಸ ಇಲ್ಲದೆ ಖಾಲಿ ಕುಳಿತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.