ADVERTISEMENT

ಕಿಡಿಗೇಡಿಗಳಿಂದ ನನ್ನಹೆಸರಿನಲ್ಲಿ ಪತ್ರ: ಶಾಸಕ ಜಿ.ಸೋಮಶೇಖರರೆಡ್ಡಿ

ನಾನು ದೇಶದ್ರೋಹಿಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 9:49 IST
Last Updated 21 ಜನವರಿ 2020, 9:49 IST
ಶಾಸಕ ಜಿ.ಸೋಮಶೇಖರರೆಡ್ಡಿ
ಶಾಸಕ ಜಿ.ಸೋಮಶೇಖರರೆಡ್ಡಿ    

ಬಳ್ಳಾರಿ:ಸಿಎಎ, ಎನ್ಆರ್‌ಸಿ ಬೆಂಬಲಿಸಿ, ದೇಶದ್ರೋಹಿಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆಯೆ ಹೊರತುಯಾವುದೇ ಒಂದು ಸಮುದಾಯವನ್ನು ಉದ್ದೇಶಿಸಿ ಅಲ್ಲ. ಆದರೆ, ಕಿಡಿಗೇಡಿಗಳು ನನ್ನ ಹೆಸರು, ವಿಳಾಸವುಳ್ಳ ಸುಳ್ಳುಪತ್ರವನ್ನು ರಾಜ್ಯದಾದ್ಯಂತ ಹರಡುತ್ತಿದ್ದಾರೆ. ಅವರನ್ನು ದೇವರೇ ನೋಡಿಕೊಳ್ಳುತ್ತಾನೆಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಸ್ಪಷ್ಟಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಳ್ಳುಪತ್ರವನ್ನು ಹರಡುತ್ತಿರುವವರ ಕುರಿತು ಈಗಾಗಲೇ ಐಜಿಪಿ ಆದೇಶದಂತೆ ರಾಯಚೂರು ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಿಡಿಗೇಡಿಗಳು ರಾಜ್ಯದಾದ್ಯಂತ ಪೋಸ್ಟ್ ಮಾಡಿರುವ 50 ಪತ್ರಗಳು ವಿಳಾಸ ದೊರೆಯದೇ ನಮ್ಮ ಮನೆಗೆ ವಾಪಸ್ ಬರುತ್ತಿವೆ. ಇವು ಸುಳ್ಳುಪತ್ರಗಳು. ಈ ಕುರಿತು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT