ವಿಜಯಪುರ: ‘ಸಚಿವ ಆಗಬೇಕೆಂದರೆ ದೆಹಲಿಗೆ ಹೋಗಿ ಕೂರಬೇಕು, ಓಲೈಸಬೇಕು. ಅದೆಲ್ಲ ನನ್ನಿಂದ ಆಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಮಂತ್ರಿ ಆಗ್ತಾರೆ, ಹೇಗೆ ಆಗ್ತಾರೆ ಎಂಬ ಕಥೆಗಳೆಲ್ಲ ಗೊತ್ತು. ಸಚಿವ ಸ್ಥಾನಕ್ಕಾಗಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮನೆ ಬಾಗಿಲಿಗೆ ಹೋಗಿಲ್ಲ. ಯತ್ನಾಳ ಯಾವತ್ತೂ ಗುಡುಗುತ್ತಿರುತ್ತಾನೆ. ಸದ್ದಡಗಿಸುವುದು ಸಾಧ್ಯವಿಲ್ಲ. ಸಂಪುಟ ವಿಸ್ತರಣೆಯ ನಂತರ ನನ್ನ ವಿಚಾರಗಳನ್ನು ಹೇಳುತ್ತೇನೆ’ ಎಂದರು.
ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹಿಂದೂ:
ಸಿದ್ದರಾಮಯ್ಯ ಒಳ್ಳೆಯ ನಾಯಕ ಆದರೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಪಾರ್ಟಿಗೆ ಸೇರಿ ಕ್ರಾಸ್ ಬ್ರೀಡ್ ಹಿಂದೂ ಆಗಿದ್ದಾರೆ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.