ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಮುಂಬೈನ ರಿನೈಸೆನ್ಸ್ ಹೋಟೆಲ್ ಎದರು ಪಟ್ಟು ಬಿಡದೇ ಕಾಯುತ್ತಿರುವಾಗಲೇ, ಅಲ್ಲಿದ್ದ ಅತೃಪ್ತ ಶಾಸಕರು ಹಿಂಬದಿ ಗೇಟ್ನಿಂದ ಬೇಡೆಗೆ ಸ್ಥಳಾಂತರಗೊಂಡಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ಹೋಟೆಲ್ನ ಗೇಟ್ ಬಳಿಯೇ ಶಿವಕುಮಾರ್ ಅವರು ಕಾಯುತ್ತಿದ್ದಾರೆ. ಈ ನಡುವೆ ಶಾಸಕರು ಬೇರೆಡೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಕುಮಾರ್ ಅವರು ಪ್ರಭಾವ ಬಳಸಿ, ಹೋಟೆಲ್ಗೆ ಪ್ರವೇಶಿಸಬಹುದು ಎಂದು ಅತೃಪ್ತ ಶಾಸಕರು ಬೇರೆಡೆಗೆ ಹೋಗುವ ಆಲೋಚನೆ ಮಾಡಿದ್ದಾರೆ.
‘ಬಿಜೆಪಿ ಅವರು ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ’ಎಂದು ಶಿವಕುಮಾರ್ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.