ADVERTISEMENT

‘ರಾಜೀನಾಮೆ ಹಿಂಪಡೆಯುತ್ತೇನೆ’ ಎಂದು ಸ್ಪಷ್ಟವಾಗಿ ಕೊನೆಯವರೆಗೂ ಹೇಳಲಿಲ್ಲ ಎಂಟಿಬಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 6:42 IST
Last Updated 13 ಜುಲೈ 2019, 6:42 IST
   

ಬೆಂಗಳೂರು:‘ಹಿರಿಯ ನಾಯಕರ ಮಾತಿಗೆ ಬೆಲೆಕೊಟ್ಟು ಕಾಲಾವಕಾಶ ಕೇಳಿದ್ದೀನಿ. ಸುಧಾಕರ್ ಜೊತೆಗೆ ಚರ್ಚೆ ಮಾಡಿ, ಅವರನ್ನು ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿಸುತ್ತೇನೆ. ನನಗಂತೂ ಇಲ್ಲಿಯೇ (ಕಾಂಗ್ರೆಸ್) ಉಳಿಯಬೇಕು ಅಂತ ಇದೆ’ ಎಂದು ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ರಾಜೀನಾಮೆ ಹಿಂಪಡೆಯುತ್ತೇನೆ’ ಎಂದು ಸ್ಪಷ್ಟವಾಗಿ ಕೊನೆಯವರೆಗೂ ಹೇಳಲಿಲ್ಲ.

ಸರ್ಕಾರದ ಬಗ್ಗೆ ಅಸಮಾಧಾನ ಇದ್ದ ಕಾರಣದಿಂದಲೇ ನಾನು ರಾಜೀನಾಮೆ ಕೊಟ್ಟೆ. ಯಾವ ಪಕ್ಷದಲ್ಲಿ ತಾನೆ ಅಸಮಾಧಾನ ಇಲ್ಲ ಹೇಳಿ? ಎಲ್ಲರೂ ಜೊತೆಗೂಡಿ ಹೋಗಬೇಕು ಅಂತ ಅಂದುಕೊಂಡಿದ್ದೇವೆ. ಮುಂದೇನಾಗುತ್ತೋ ನೋಡಬೇಕು. ನನ್ನ ಕೈಲಾಗುವ ಪ್ರಯತ್ನ ನಾನು ಮಾಡ್ತೀನಿ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.