ಕೊಪ್ಪಳ:ಸಣ್ಣ ನೀರಾವರಿ ಇಲಾಖೆಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಹಗರಣ ಕುರಿತು ಎರಡು ವರ್ಷತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಮಂಗಳವಾರ 1.43 ಲಕ್ಷ ಪುಟಗಳ ದೋಷಾರೋಪಪಟ್ಟಿಯನ್ನುನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆಸಲ್ಲಿಸಿದರು.
2016 ಮೇ 11ರಂದು ಸಣ್ಣ ನೀರಾವರಿ ಇಲಾಖೆಯ ವಿವಿಧ ಕಾಮಗಾರಿಗಳ ತುಂಡು ಗುತ್ತಿಗೆ ನೀಡಿದ ಪ್ರಕರಣಗಳಲ್ಲಿ ಸುಮಾರು ₹40 ಕೋಟಿ ಹಗರಣ ನಡೆದಿತ್ತು.
42 ಗುತ್ತಿಗೆದಾರರು, 26 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ಸರ್ಕಾರ,ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
‘ಸಣ್ಣ ನೀರಾವರಿ ಇಲಾಖೆಯ ಅಂದಿನ ಕೊಪ್ಪಳದ ಕಾರ್ಯನಿರ್ವಾಹಕ ಎಂಜಿನಿಯರ್ಆರ್.ಜಿ.ಪ್ರೇಮಾನಂದ್ ಮೊದಲ ಆರೋಪಿಯಾಗಿದ್ದಾರೆ. ಒಟ್ಟು18 ಸರ್ಕಾರಿ ಅಧಿಕಾರಿಗಳು, 42 ಜನ ಗುತ್ತಿಗೆದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ.ಇದರಲ್ಲಿರಾಜಕಾರಣಿಗಳು ಭಾಗಿಯಾದ ಬಗ್ಗೆ ಯಾವುದೇ ದಾಖಲೆ ಇಲ್ಲ’ ಎಂದು ಸಿಐಡಿ ಡಿವೈಎಸ್ಪಿ ಕೆ.ಪುರುಷೋತ್ತಮ್ ಅವರು ಮಾಧ್ಯಮಗಳಿಗೆಮಾಹಿತಿ ನೀಡಿದರು.
‘ನಾನು ಮತ್ತು ಗೋವಿಂದ ಕಾರಜೋಳ ಅವರುಸಣ್ಣ ನೀರಾವರಿ ಖಾತೆ ಸಚಿವರಾಗಿದ್ದ ಅವಧಿಯಲ್ಲಿಈ ಹಗರಣ ನಡೆದಿತ್ತು. ನಾನೇ
ತನಿಖೆಗೆ ಆದೇಶಿಸಿದ್ದೆ’ ಎಂದು ಮಾಜಿ ಸಚಿವ ಶಿವರಾಜ ತಂಗಡಗಿಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.