ADVERTISEMENT

ಸಿದ್ದರಾಮಯ್ಯ ಕೈಯಲ್ಲಿ ಕಾಂಗ್ರೆಸ್‌: ನಳಿನ್‌ ಕುಮಾರ್ ಕಟೀಲ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:20 IST
Last Updated 14 ಸೆಪ್ಟೆಂಬರ್ 2021, 17:20 IST
ನಳಿನ್‌ ಕುಮಾರ್ ಕಟೀಲ್
ನಳಿನ್‌ ಕುಮಾರ್ ಕಟೀಲ್   

ಉಳ್ಳಾಲ: ‘ಕಾಂಗ್ರೆಸ್‌ ಇಂದು ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಡಿ.ಕೆ. ಶಿವಕುಮಾರ್ ಕೈಯಲ್ಲಿ ಬೆತ್ತ ಮಾತ್ರ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಲೇವಡಿ ಮಾಡಿದರು.

ಬಿಜೆಪಿಯಮಂಗಳೂರು ಮಂಡಲದ ಮಂಜನಾಡಿ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಎತ್ತಿನ ಬಂಡಿಯನ್ನು ನಿಯಂತ್ರಿಸುವ ಹಗ್ಗ ಸಿದ್ದರಾಮಯ್ಯ ಕೈಯಲ್ಲಿತ್ತು. ಪಕ್ಷದ ಅಧಿಕಾರ ಅವರ ಕೈಯಲ್ಲಿಯೇ ಇದೆ ಎಂಬುದರ ಸೂಚನೆ ಇದು. ಬೆಲೆಯೇರಿಕೆ ವಿಚಾರವನ್ನು ಬದಿಗಿಡಿ, ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಿದ್ದರೆ, ಬಂಡಿ ಓಡಿಸಲು ಎತ್ತು ಕೂಡಾ ಇರುತ್ತಿರಲಿಲ್ಲ. ಎಲ್ಲವೂ ಕಸಾಯಿಖಾನೆಯಲ್ಲಿ ಇರುತ್ತಿದ್ದವು’ ಎಂದರು.

ADVERTISEMENT

‘ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇನ್ನು 20 ವರ್ಷ ಸಿದ್ರಾಮಣ್ಣ ಮತ್ತು ಡಿಕೆಶಿ ನಿರುದ್ಯೋಗಿಗಳು. ಏಕೆಂದರೆ, ಬಿಜೆಪಿಯೇ ಮುಂದಿನ ಚುನಾವಣೆಯಲ್ಲಿಯೂ ಗೆದ್ದು ಅಧಿಕಾರದಲ್ಲಿ ಇರುತ್ತದೆ. ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ದೊಡ್ಡಬಳ್ಳಾಪುರ ಚುನಾವಣೆಗಳು ಇದಕ್ಕೆ ನಿದರ್ಶನ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.