ADVERTISEMENT

ಕುಶಾಲನಗರ: ಕಾವೇರಿ ನದಿದಂಡೆಯಲ್ಲಿ ಮೊಸಳೆ ಮರಿ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 14:12 IST
Last Updated 5 ಆಗಸ್ಟ್ 2020, 14:12 IST
ಕುಶಾಲನಗರದ ವಿವೇಕಾನಂದ ಬಡಾವಣೆಯ ಕಾವೇರಿ ನದಿ ದಂಡೆಯಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದೆ
ಕುಶಾಲನಗರದ ವಿವೇಕಾನಂದ ಬಡಾವಣೆಯ ಕಾವೇರಿ ನದಿ ದಂಡೆಯಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದೆ   

ಕುಶಾಲನಗರ : ಪಟ್ಟಣದ ವಿವೇಕಾನಂದ ಬಡಾವಣೆಯ ಕಾವೇರಿ ನದಿ ದಡದಲ್ಲಿ ನಾಲ್ಕು ಮೊಸಳೆ ಮರಿಗಳು ಬುಧವಾರ ಪ್ರತ್ಯಕ್ಷವಾಗಿವೆ.

ನದಿ ಮೈದುಂಬಿ ಹರಿಯುತ್ತಿದ್ದು, ಮೊಸಳೆಗಳು ದಂಡೆ ಮೇಲೆ ಹತ್ತಿ ಬರುತ್ತಿವೆ. ನದಿಯಲ್ಲಿ ಬೃಹತ್ ಗಾತ್ರದ ಹೆಣ್ಣು ಮೊಸಳೆಯಿದ್ದು, ಇತ್ತೀಚಿನ ದಿನಗಳಲ್ಲಿ ಈ ಮೊಸಳೆ ನದಿ ದಡದಲ್ಲಿ‌ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿದೆ. ಈ ಮರಿಗಳು ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ದಡದತ್ತ ಲಗ್ಗೆ ಹಾಕುತ್ತಿವೆ.

ನಾಲ್ಕು ಮರಿಗಳು ದಡದಲ್ಲಿ ಓಡಾಡುವುದನ್ನು ನೋಡಿದ ಬಡಾವಣೆ ನಿವಾಸಿಗಳು ಆತಂಕಗೊಂಡಿದ್ದಾರೆ.

ADVERTISEMENT

ನದಿಯಲ್ಲಿರುವ ಬೃಹತ್ ಮೊಸಳೆಯನ್ನು ಹಿಡಿದು ಬೇರೆ ಕಡೆಗೆ ಬೀಡುವಂತೆ ಅರಣ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದೀಗ ಮೊಸಳೆ ಮರಿಗಳು‌ ಬಡಾವಣೆಯ ಮನೆಗಳತ್ತಬರುತ್ತಿರುವುದು ಆತಂಕ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.