ADVERTISEMENT

ರಾತ್ರಿ ಕರ್ಫ್ಯೂ ರದ್ದು: ಯಾವುದಕ್ಕೆ ರಿಯಾಯಿತಿ, ಯಾವುದಕ್ಕೆ ನಿರ್ಬಂಧ?

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 10:35 IST
Last Updated 29 ಜನವರಿ 2022, 10:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜನವರಿ 31 ರಿಂದ ರಾಜ್ಯದಾದ್ಯಂತ ಜಾರಿಯಲ್ಲಿರುವ ರಾತ್ರಿ ಕರ್ಪ್ಯೂವನ್ನು ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಯಾವುದಕ್ಕೆ ರಿಯಾಯಿತಿ:
- ಸಾರಿಗೆ ವಾಹನಗಳಲ್ಲಿ ಆಸನ ಶೇ 100 ಭರ್ತಿಗೆ
- ಬಾರ್‌, ಪಬ್‌, ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಶೇ 100ರರಷ್ಟು ಭರ್ತಿಗೆ
- ಎಲ್ಲ ಕಚೇರಿಗಳಲ್ಲಿ ಶೇ 100 ಹಾಜರಾತಿಗೆ

ನಿರ್ಬಂಧ ಮುಂದುವರಿಕೆ:
- ಸಿನಿಮಾ, ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ 50ರಷ್ಟು ಭರ್ತಿಗಷ್ಟೇ ಅನುಮತಿ
- ಮದುವೆಗಳಿಗೆ ಇನ್ನು ಮುಂದೆ ಹೊರಾಂಗಣದಲ್ಲಿ ಗರಿಷ್ಠ 300, ಒಳಾಂಗಣದಲ್ಲಿ ಗರಿಷ್ಠ 200 ಮಂದಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ.
- ಧಾರ್ಮಿಕ ಸ್ಥಳಗಳಲ್ಲಿ ಅರ್ಚನೆ, ಮಂಗಳಾರತಿಯಂತಹ ಸೇವೆಗಳಿಗೆ ಏಕಕಾಲಕ್ಕೆ ಗರಿಷ್ಠ 50 ಮಂದಿಗಷ್ಟೇ ಅವಕಾಶ
- ಎಲ್ಲ ಜಾತ್ರೆಗಳು, ರ‍್ಯಾಲಿಗಳು, ಧರಣಿ, ಪ್ರತಿಭಟನೆ, ಸಾಮಾಜಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳಿಗೆ ನಿರ್ಬಂಧ ಮುಂದುವರಿಕೆ
- ಈಜುಕೊಳ, ಜಿಮ್‌ಗಳಲ್ಲಿ ಶೇ 50 ಅನುಮತಿ
- ಕ್ರೀಡಾ ಕಾಂಪ್ಲೆಕ್ಸ್‌, ಕ್ರೀಡಾಂಗಣಗಳಲ್ಲಿ ಶೇ 50 ಅವಕಾಶ
- ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್ ತಪಾಸಣೆ ವರದಿ ಕಡ್ಡಾಯ

ಶಾಲೆಗಳಲ್ಲಿ:
ಬೆಂಗಳೂರಿನಲ್ಲಿ ಶಾಲೆಗಲ್ಲಿ ಎಲ್ಲ ತರಗತಿಗಳು ಸೋಮವಾರದಿಂದ ಆರಂಭ. ಕೋವಿಡ್‌ ಪತ್ತೆಯಾದರೆ ಅಂಥ ತರಗತಿಯನ್ನು ಮಾತ್ರ ಮುಚ್ಚಲಾಗುವುದು. ಇಡೀ ಶಾಲೆಯಲ್ಲಿ ಎಷ್ಟು ಮಂದಿಗೆ ಕೋವಿಡ್‌ ದೃಢಪಟ್ಟಿದೆ ಎನ್ನುವುದನ್ನು ಆಧರಿಸಿ ಅಂಥ ಶಾಲೆಯನ್ನು ಎಷ್ಟು ದಿನ ಮುಚ್ಚಬೇಕು ಎಂದು ಆಯಾ ಜಿಲ್ಲಾಧಿಕಾರಿಗಳು ತೀರ್ಮಾನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.