ಬೆಂಗಳೂರು: ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ನಳಿನ್ ಅತುಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯಲ್ಲಿ ಪ್ರಭಾರ ಆಗಿದ್ದ ಎಂ. ಕನಗವಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಒಟ್ಟು 19 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಯಾದವರು
- ಅನಿಲ್ಕುಮಾರ್ ಬಿ.ಎಚ್.– ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ
- ಶಮ್ಲಾ ಇಕ್ಬಾಲ್– ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ
- ಎಂ. ಕನಗವಲ್ಲಿ– ಆಯುಕ್ತರು, ಆಹಾರ ಇಲಾಖೆ
- ವಿ. ವಿ. ಜೋತ್ಸ್ನಾ– ವ್ಯವಸ್ಥಾಪಕ ನಿರ್ದೇಶಕಿ, ರೇಷ್ಮೆ ಕೈಗಾರಿಕಾ ನಿಗಮ
- ಯಶವಂತ ಗುರುಕರ್– ಜಿಲ್ಲಾಧಿಕಾರಿ, ಕಲಬುರ್ಗಿ
- ಹೆಪ್ಸಿಬಾ ರಾಣಿ ಕೊರ್ಲಪಾಟಿ– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ವಿದ್ಯುತ್ ಕಾರ್ಖಾನೆ
- ಕೆ.ಎ. ದಯಾನಂದ– ಆಯುಕ್ತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
- ಜಗದೀಶ ಜಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
- ಕೆ.ಎಸ್. ಲತಾಕುಮಾರಿ– ನಿರ್ದೇಶಕಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ
- ವೆಂಕಟ್ ರಾಜ – ಜಿಲ್ಲಾಧಿಕಾರಿ, ಕೋಲಾರ
- ಶಿಲ್ಪಾ ನಾಗ್– ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ
- ಶಿಲ್ಪಾ ಶರ್ಮ– ಆಯುಕ್ತರು, ಪಂಚಾಯತ್ರಾಜ್ ಇಲಾಖೆ
- ಎನ್.ಎಂ. ನಾಗರಾಜ– ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ವೈದ್ಯಕೀಯ ಸಾಮಗ್ರಿಗಳ ಪೂರೈಕೆ ನಿಗಮ
- ಶೇಖ್ ತನ್ವೀರ್ ಆಸಿಫ್– ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ
- ಲಿಂಗಮೂರ್ತಿ ಜಿ– ಕಾರ್ಯದರ್ಶಿ, ರಾಜ್ಯ ಚುನಾವಾಣಾ ಆಯೋಗ
- ಇಬ್ರಾಹಿಂ ಮೈಗೂರ– ಕಾರ್ಯದರ್ಶಿ, ರೇರಾ
- ಗರಿಮಾ ಪವಾರ್– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯಾದಗಿರಿ
- ಭುವನೇಶ ದೇವಿದಾಸ ಪಾಟೀಲ– ವ್ಯವಸ್ಥಾಪಕ ನಿರ್ದೇಶಕ, ಈಶಾನ್ಯ ಸಾರಿಗೆ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.