ADVERTISEMENT

19 ಐಎಎಸ್‌ ಅಧಿಕಾರಿಗಳ ವರ್ಗ: ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ನಳಿನ್ ಅತುಲ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 6:29 IST
Last Updated 25 ಜನವರಿ 2022, 6:29 IST
   

ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ನಳಿನ್ ಅತುಲ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯಲ್ಲಿ ಪ್ರಭಾರ ಆಗಿದ್ದ ಎಂ. ಕನಗವಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಒಟ್ಟು 19 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರು

- ಅನಿಲ್‌ಕುಮಾರ್‌ ಬಿ.ಎಚ್‌.– ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ

ADVERTISEMENT

- ಶಮ್ಲಾ ಇಕ್ಬಾಲ್‌– ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ

- ಎಂ. ಕನಗವಲ್ಲಿ– ಆಯುಕ್ತರು, ಆಹಾರ ಇಲಾಖೆ

- ವಿ. ವಿ. ಜೋತ್ಸ್ನಾ– ವ್ಯವಸ್ಥಾಪಕ ನಿರ್ದೇಶಕಿ, ರೇಷ್ಮೆ ಕೈಗಾರಿಕಾ ನಿಗಮ

- ಯಶವಂತ ಗುರುಕರ್‌– ಜಿಲ್ಲಾಧಿಕಾರಿ, ಕಲಬುರ್ಗಿ

- ಹೆಪ್ಸಿಬಾ ರಾಣಿ ಕೊರ್ಲಪಾಟಿ– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ವಿದ್ಯುತ್‌ ಕಾರ್ಖಾನೆ

- ಕೆ.ಎ. ದಯಾನಂದ– ಆಯುಕ್ತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

- ಜಗದೀಶ ಜಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

- ಕೆ.ಎಸ್. ಲತಾಕುಮಾರಿ– ನಿರ್ದೇಶಕಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ

- ವೆಂಕಟ್‌ ರಾಜ – ಜಿಲ್ಲಾಧಿಕಾರಿ, ಕೋಲಾರ

- ಶಿಲ್ಪಾ ನಾಗ್‌– ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ

- ಶಿಲ್ಪಾ ಶರ್ಮ– ಆಯುಕ್ತರು, ಪಂಚಾಯತ್‌ರಾಜ್‌ ಇಲಾಖೆ

- ಎನ್‌.ಎಂ. ನಾಗರಾಜ– ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ವೈದ್ಯಕೀಯ ಸಾಮಗ್ರಿಗಳ ಪೂರೈಕೆ ನಿಗಮ

- ಶೇಖ್ ತನ್ವೀರ್‌ ಆಸಿಫ್‌– ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ

- ಲಿಂಗಮೂರ್ತಿ ಜಿ– ಕಾರ್ಯದರ್ಶಿ, ರಾಜ್ಯ ಚುನಾವಾಣಾ ಆಯೋಗ

- ಇಬ್ರಾಹಿಂ ಮೈಗೂರ– ಕಾರ್ಯದರ್ಶಿ, ರೇರಾ

- ಗರಿಮಾ ಪವಾರ್‌– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯಾದಗಿರಿ

- ಭುವನೇಶ ದೇವಿದಾಸ ಪಾಟೀಲ– ವ್ಯವಸ್ಥಾಪಕ ನಿರ್ದೇಶಕ, ಈಶಾನ್ಯ ಸಾರಿಗೆ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.