ADVERTISEMENT

ಸದಾಶಿವ ಆಯೋಗದ ವರದಿ ಜಾರಿ ಪ್ರಸ್ತಾಪ: ಗೋಣು ಅಲ್ಲಾಡಿಸಿ ಹೋದ ಸಿಎಂ

​ಪ್ರಜಾವಾಣಿ ವಾರ್ತೆ
Published 13 ಮೇ 2022, 6:58 IST
Last Updated 13 ಮೇ 2022, 6:58 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು:ಪರಿಶಿಷ್ಟ ಜಾತಿಯ ಆಂತರಿಕ ಮೀಸಲು ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ. ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೌನವಾಗಿ ಗೋಣು ತಿರುಗಿಸಿ ನಿರ್ಗಮಿಸಿದ ಪ್ರಸಂಗ ಇಲ್ಲಿ ನಡೆಯಿತು.

ವಿಶ್ವ ಮಾದಿಗರ ನಾಲ್ಕನೇ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ನಂತರ ಸ್ಥಳದಿಂದ ತೆರಳುತ್ತಿದ್ದ ಮುಖ್ಯಮಂತ್ರಿಗಳನ್ನು ಈ ಕುರಿತು 'ಪ್ರಜಾವಾಣಿ'ಪ್ರಶ್ನಿಸಿದಾಗ ಯಾವುದೇ ಮೌಖಿಕ ಪ್ರತಿಕ್ರಿಯೆ ನೀಡಲು ನಿರಾಕರಿಸಿದರಲ್ಲದೆ, ಗೋಣು ಅಲ್ಲಾಡಿಸಿ ತೆರಳಿದರು.

ವೇದಿಕೆಯ ಮೇಲೆ ಮಾತನಾಡುತ್ತಾ, 'ನಿಮಗಾಗಿ ನನ್ನ ಮನೆಯ ಬಾಗಿಲು ಮಾತ್ರವಲ್ಲ, ಹೃದಯದ ಬಾಗಿಲು ಕೂಡಾ ಸದಾ ತೆರೆದಿರುತ್ತದೆ'ಎಂದು ಸಮಾವೇಶದಲ್ಲಿ ಭಾವುಕ ನುಡಿಗಳನ್ನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.