ಬೆಂಗಳೂರು:ಪರಿಶಿಷ್ಟ ಜಾತಿಯ ಆಂತರಿಕ ಮೀಸಲು ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ. ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೌನವಾಗಿ ಗೋಣು ತಿರುಗಿಸಿ ನಿರ್ಗಮಿಸಿದ ಪ್ರಸಂಗ ಇಲ್ಲಿ ನಡೆಯಿತು.
ವಿಶ್ವ ಮಾದಿಗರ ನಾಲ್ಕನೇ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ನಂತರ ಸ್ಥಳದಿಂದ ತೆರಳುತ್ತಿದ್ದ ಮುಖ್ಯಮಂತ್ರಿಗಳನ್ನು ಈ ಕುರಿತು 'ಪ್ರಜಾವಾಣಿ'ಪ್ರಶ್ನಿಸಿದಾಗ ಯಾವುದೇ ಮೌಖಿಕ ಪ್ರತಿಕ್ರಿಯೆ ನೀಡಲು ನಿರಾಕರಿಸಿದರಲ್ಲದೆ, ಗೋಣು ಅಲ್ಲಾಡಿಸಿ ತೆರಳಿದರು.
ವೇದಿಕೆಯ ಮೇಲೆ ಮಾತನಾಡುತ್ತಾ, 'ನಿಮಗಾಗಿ ನನ್ನ ಮನೆಯ ಬಾಗಿಲು ಮಾತ್ರವಲ್ಲ, ಹೃದಯದ ಬಾಗಿಲು ಕೂಡಾ ಸದಾ ತೆರೆದಿರುತ್ತದೆ'ಎಂದು ಸಮಾವೇಶದಲ್ಲಿ ಭಾವುಕ ನುಡಿಗಳನ್ನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.