ಮೈಸೂರು: ‘ಸಾಮಾಜಿಕ ನ್ಯಾಯ ಪಾಲಿಸುವವರಿಗೆ ಮಾತ್ರ ನನ್ನ ಬೆಂಬಲ. ಅದನ್ನು ಯಾರೇ ವಿರೋಧಿಸಿದರೂ ಅವರ ಜತೆ ಇರುವುದು ಸಾಧ್ಯವೇ ಇಲ್ಲ’ ಎಂದು ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿ ಶುಕ್ರವಾರ ಹೇಳಿದರು.
ಕನಕ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು. ‘ನಾನು ಎಂದಿಗೂ ಸ್ವಾಭಿಮಾನ ಮರೆತು ರಾಜಕಾರಣ ಮಾಡಿಲ್ಲ.. ಯಾರಿಗೇ ಆದರೂ ತಲೆ ಬಗ್ಗಿಸಿ ರಾಜಕಾರಣ ಮಾಡುವ ಅಭ್ಯಾಸ ನನಗಿಲ್ಲ. ಸ್ವಾಭಿಮಾನ ಕಳೆದುಹೋದ ಮೇಲೆ ಇದ್ದರೆಷ್ಟು, ಸತ್ತರೆಷ್ಟು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.