ADVERTISEMENT

ಜರ್ಮನಿಯ ಕನ್ನಡ ಬಳಗದಿಂದ ‘ಎನ್‌ಎಸ್‌ಎಲ್‌ ನುಡಿ ನಮನ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 3:25 IST
Last Updated 24 ಮಾರ್ಚ್ 2021, 3:25 IST
ಎನ್‌.ಎಸ್‌.ಲಕ್ಷ್ಮೀನಾರಾಯಣ
ಎನ್‌.ಎಸ್‌.ಲಕ್ಷ್ಮೀನಾರಾಯಣ    

ಬೆಂಗಳೂರು: ಜರ್ಮನಿಯ ಕನ್ನಡ ಬಳಗವು ‘ಎನ್‌ಎಸ್‌ಎಲ್‌ ನುಡಿನಮನ’ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ಕವಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರನ್ನು ಸ್ಮರಿಸಿತು.

‘ಕಾರ್ಯಕ್ರಮದಲ್ಲಿ ಎನ್‌ಎಸ್‌ಎಲ್‌ ಅವರ ಜೀವನ ಮತ್ತು ಸಾಧನೆಗಳನ್ನು ಮೆಲುಕು ಹಾಕಲಾಯಿತು. ಜರ್ಮನಿಯಲ್ಲಿರುವ ಕನ್ನಡಿಗರು ಹಾಗೂ ಅವರ ಮಕ್ಕಳು ಭಾವಗೀತೆಗಳನ್ನು ಹಾಡಿದರು. ಕವನ ಮತ್ತು ಶಿಶು ಪದ್ಯಗಳನ್ನು ವಾಚಿಸಿದರು’ ಎಂದು ಕೆರ್ಪೆನ್‌ ನಗರದಲ್ಲಿ ನೆಲೆಸಿರುವ ಸಂತೋಷ್‌ ಶ್ರೀಧರ್‌ ತಿಳಿಸಿದರು.

‘ಡ್ರೆಸ್ಡೇನ್‌ನಲ್ಲಿ ನೆಲೆಸಿರುವ ಲಕ್ಷ್ಮಿ ಅವರು ‘ಈ ಬಾನು ಈ ಚುಕ್ಕಿ’ ಗೀತೆಯನ್ನು ಪ್ರಸ್ತುತಪಡಿಸಿದರು. ಮ್ಯೂನಿಕ್‌ನಲ್ಲಿರುವ ಸವಿತಾ, ಫ್ರಾಂಕ್ಫರ್ಟ್‌ನಲ್ಲಿ ವಾಸವಿರುವ ಶೋಭಾ ಲೋಕೇಶ್‌ ಹಾಗೂ ಬರ್ಲಿನ್‌ನಲ್ಲಿರುವ ಶ್ವೇತ ಅವರು ಕವನಗಳನ್ನು ವಾಚಿಸಿದರು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.