ADVERTISEMENT

‘ಭಾವನೆಗಳನ್ನು ಮೀಟುವ ಕವನ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 5:34 IST
Last Updated 10 ಏಪ್ರಿಲ್ 2022, 5:34 IST
ಸಂಗೀತ ನಿರ್ದೇಶಕ ವಿ.ಮನೋಹರ್‌ (ಬಲದಿಂದ ಎರಡನೇಯವರು) ಕವನ ಸಂಕಲನ ಬಿಡುಗಡೆ ಮಾಡಿದರು. (ಎಡದಿಂದ) ಮಲ್ಲಿಕಾರ್ಜುನ ಪಾಟೀಲ್‌, ಪ್ರಕಾಶಕಿ ಮಮತಾ ಎಸ್.ಬನ್ನಂಜೆ, ಸುಧಾಕರ ಬನ್ನಂಜೆ, ಲೇಖಕಿ ಶಾಂತಲಾ ಪಾಟೀಲ್ ಹಾಗೂ ಪತ್ರಕರ್ತ ಸ್ನೇಹ ಪ್ರಿಯ ನಾಗರಾಜ್ ಇದ್ದರು. 
ಸಂಗೀತ ನಿರ್ದೇಶಕ ವಿ.ಮನೋಹರ್‌ (ಬಲದಿಂದ ಎರಡನೇಯವರು) ಕವನ ಸಂಕಲನ ಬಿಡುಗಡೆ ಮಾಡಿದರು. (ಎಡದಿಂದ) ಮಲ್ಲಿಕಾರ್ಜುನ ಪಾಟೀಲ್‌, ಪ್ರಕಾಶಕಿ ಮಮತಾ ಎಸ್.ಬನ್ನಂಜೆ, ಸುಧಾಕರ ಬನ್ನಂಜೆ, ಲೇಖಕಿ ಶಾಂತಲಾ ಪಾಟೀಲ್ ಹಾಗೂ ಪತ್ರಕರ್ತ ಸ್ನೇಹ ಪ್ರಿಯ ನಾಗರಾಜ್ ಇದ್ದರು.    

ಬೆಂಗಳೂರು: ‘ಶಾಂತಲಾ ಅವರು ರಚಿಸಿರುವ ಕವನಗಳು ಮನ ಮಿಡಿಯುವಂತಿವೆ. ಓದುಗರ ಭಾವನೆಗಳನ್ನು ಮೀಟುವಂತಿವೆ’ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್‌ ಅಭಿಪ್ರಾಯಪಟ್ಟರು.

ಸ್ನೇಹ ಕೃಪಾ ಮೂವೀಸ್‌ ಆಯೋಜಿಸಿದ್ದ ಶಾಂತಲಾ ಪಾಟೀಲ್‌ ಅವರ ‘ಪ್ರೇಮ ತರಂಗ’ ಕವನ ಸಂಕಲನ ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು.

‘ಶಾಂತಲಾ ಅವರ ಬರಹಗಳಲ್ಲಿ ಹೊಸತನವಿದೆ. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದರು.

ADVERTISEMENT

ನಾಟಕಕಾರ ಸುಧಾಕರ ಬನ್ನಂಜೆ, ‘ಬರಹಕ್ಕೆ ಅಪಾರ ಶಕ್ತಿ ಇದೆ. ಒಂದು ಲೇಖನ ಸಮಾಜವನ್ನೇ ಬದಲಾವಣೆ ‌ಮಾಡಿದ ಉದಾಹರಣೆ ಇದೆ. ಡಿಜಿಟಲ್ ಮಾಧ್ಯಮ ಬಂದರೂ ಪುಸ್ತಕಗಳ ಬೇಡಿಕೆ ಕಡಿಮೆಯಾಗುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.