ಮಡಿಕೇರಿ: ‘ರಾಮಮಂದಿರ ನಿರ್ಮಾಣಕ್ಕೆ ಬಹಳಷ್ಟು ಮುಸ್ಲಿಮರು ಹಾಗೂ ಕ್ರಿಶ್ಚಿಯನ್ ಸಮುದಾಯದವರೇ ಸಂತೋಷದಿಂದ ದೇಣಿಗೆ ನೀಡುತ್ತಿರುವಾಗ, ರಾಜಕಾರಣಿಗಳು ಸಣ್ಣತನ ತೋರುವುದು ಸಲ್ಲದು. ದೇಣಿಗೆ ವಿಚಾರದಲ್ಲಿ ಮನೆ ಬಳಿಗೆ ಬಂದು ಯಾರ ಮೇಲೆದಾರೂ ಒತ್ತಡ ಹೇರಿದ್ದರೆ ಬಹಿರಂಗವಾಗಿ ಹೇಳಲಿ’ ಎಂದು ಸಂಸದ ಪ್ರತಾಪ ಸಿಂಹ ಸವಾಲು ಹಾಕಿದರು.
‘ಸೈದ್ಧಾಂತಿಕವಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿ. ಅವರು ರಾಮಮಂದಿರ ನಿರ್ಮಾಣಕ್ಕೆ ಸಂತೋಷದಿಂದ ದೇಣಿಗೆ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇವೆ. ಕೊಡದಿದ್ದರೆ ಬೇಸರವನ್ನೂ ಮಾಡಿಕೊಂಡಿಲ್ಲ. ಕಾರ್ಯಕರ್ತರು ಬಂದು ಕೇಳಿದಾಗ ಒತ್ತಡದ ಭಾವನೆ ಬಂತು ಎನ್ನುವರು ಧೈರ್ಯವಾಗಿ ಹೇಳಲಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.