ಬೆಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಕೊಡಗು ಜಿಲ್ಲೆ ಹಾಗೂ ಲಿಂಗನಮಕ್ಕಿ ನದಿ ಪಾತ್ರದಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
‘ಎನ್ಡಿಆರ್ಎಫ್ ತಂಡ ಈಗಾಗಲೇ ಬೆಳಗಾವಿಗೆ ಬಂದಿದ್ದು, ರಕ್ಷಣೆಗೆ ಸಿದ್ಧತೆ ಮಾಡಿಕೊಂಡಿದೆ. ಪರಿಹಾರದ ಸಲುವಾಗಿ ಬೆಳಗಾವಿಗೆ ₹30 ಕೋಟಿ, ಶಿವಮೊಗ್ಗಕ್ಕೆ ₹10 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಗುರುವಾರ ತಿಳಿಸಿದರು.
‘ನಿರಾಶ್ರಿತರಿಗೆ ಮನೆ ನಿರ್ಮಿಸುವ ಸ್ಥಳಗಳಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಲಾಗುವುದು. ಹಿಂದಿನ ಸಂದರ್ಭಗಳಲ್ಲಿ ತೀರ ಚಿಕ್ಕದಾದ ಸ್ಥಳದಲ್ಲಿ ಮನೆಗಳನ್ನು ಕಟ್ಟಿಕೊಟ್ಟಿದ್ದು, ಇಂತಹ ಮನೆಗಳಿಗೆ ಜನರು ಹೋಗುತ್ತಿರಲಿಲ್ಲ. ಆದರೆ ಈ ಸಲ 30X30 ಅಥವಾ 30X40 ಅಳತೆಯ ನಿವೇಶನದಲ್ಲಿ ಮನೆ ನಿರ್ಮಿಸಲಾಗುವುದು. ನೆರೆಗೆ ತುತ್ತಾದ ಜನರು ಆಶ್ರಯ ಪಡೆದಿರುವ ಕೇಂದ್ರಗಳನ್ನು ‘ಕಾಳಜಿ ಕೇಂದ್ರ’ಗಳು ಎಂದೇ ಕರೆಯುವಂತೆ ಆದೇಶ ಹೊರಡಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.