ADVERTISEMENT

ಪೊಲೀಸರ ರಕ್ಷಣೆ ಕೋರಿದ ರಾಜು– ರುಬಿಯಾ ದಂಪತಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:00 IST
Last Updated 5 ಮಾರ್ಚ್ 2019, 19:00 IST
ಪೋಲಿಸ್ ರಕ್ಷಣೆ ಕೋರಿದ ರಾಜು ಹಾಗೂ ಅವರ ಪತ್ನಿ ರುಬಿಯಾ.
ಪೋಲಿಸ್ ರಕ್ಷಣೆ ಕೋರಿದ ರಾಜು ಹಾಗೂ ಅವರ ಪತ್ನಿ ರುಬಿಯಾ.   

ಶೃಂಗೇರಿ: ಪರಸ್ಪರ ಪ್ರೀತಿಸಿ, ಊರು ತೊರೆದು ಬಂದು ವಿವಾಹವಾಗಿರುವ ವಿಜಯಪುರದ ದಂಪತಿಯು ರಕ್ಷಣೆ ಕೋರಿ ಶೃಂಗೇರಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ನೇಕಾರಬೀದಿಯ ರುಬಿಯಾ ಹಾಗೂ ಅದೇ ಊರಿನ ರಾಜು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2018ರಲ್ಲಿ ಶೃಂಗೇರಿ ತಾಲ್ಲೂಕಿನ ಬೆಳಂದೂರು ಗ್ರಾಮದ ಓಂಕಾರೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ರುಬಿಯಾ ಮಗುವಿಗೆ ಜನ್ಮ ನೀಡಿದ್ದಾರೆ.

‌ವಿವಾಹಕ್ಕೆ ಎರಡೂ ಕುಟುಂಬಗಳ ಪೋಷಕರ ವಿರೋಧವಿದ್ದ ಕಾರಣ ಊರನ್ನೇ ತೊರೆದು ಶೃಂಗೇರಿಯಲ್ಲೇ ವಾಸಿಸುತ್ತಿದ್ದರು. ಮಗಳನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ರುಬಿಯಾ ಪೋಷಕರು ಇದೀಗ ಚಡಚಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

‘ರುಬಿಯಾ ತನ್ನ ಹೆಸರನ್ನು ಪ್ರೀತಿ ಎಂದು ಬದಲಾಯಿಸಿಕೊಂಡಿದ್ದಾರೆ. ತಾವು ವಯಸ್ಕರಾಗಿದ್ದು, ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ. ಬೇರೆ ಬೇರೆ ಧರ್ಮಕ್ಕೆ ಸೇರಿದ ಕಾರಣ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ನೀಡಬೇಕು’ ಎಂದು ಪೊಲೀಸರಲ್ಲಿ ರಾಜು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.