ADVERTISEMENT

ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ನಿವೃತ್ತ ಪಿಎಸ್‌ಐಗೆ ತಾತ್ಕಾಲಿಕ ಜೈಲು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:01 IST
Last Updated 21 ಫೆಬ್ರುವರಿ 2023, 22:01 IST
   

ರಾಯಚೂರು: ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದೆ ನಿರ್ಲಕ್ಷಿಸಿದ ಆರೋಪದ ಮೇಲೆ ನಿವೃತ್ತ ಪಿಎಸ್‌ಐ ಚಂದ್ರಕಾಂತ ಎಚ್‌.ಜಂಗಮ್‌ ಎಂಬುವವರಿಗೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು 15 ದಿನ ಕಾಲಾವಕಾಶ ನೀಡಿದೆ. ಈ ಅವಧಿ ಮುಗಿಯುವವರೆಗೆ ಕಕ್ಷಿದಾರನನ್ನು (ಮಾರ್ಚ್‌ 9ರವರೆಗೆ) ಜೈಲಿನಲ್ಲೇ ಇರಿಸಿ, ಮತ್ತೆ ಕೋರ್ಟ್‌ಗೆ ಹಾಜರುಪಡಿಸುವಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕರಿಗೆ ನ್ಯಾಯಾಧೀಶ ಜಗದೀಶ್ವರ ಅವರು ಮಂಗಳವಾರ ಆದೇಶ ನೀಡಿದರು.

ಮಹಾರಾಷ್ಟ್ರದ ಸೊಲ್ಲಾಪುರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಜಂಗಮ್‌ ಮತ್ತು ಪತ್ನಿ ಲೀಲಾವತಿ (ರಾಯಚೂರಿನವರು) ಅವರದ್ದು 2018ರಲ್ಲಿ ವಿಚ್ಛೇದನವಾಗಿತ್ತು. ಕೋರ್ಟ್‌ ಆದೇಶದಂತೆ ಪ್ರತಿ ತಿಂಗಳು ₹19,500 ಜೀವನಾಂಶ ನೀಡಲು ಚಂದ್ರಕಾಂತ ಒಪ್ಪಿದ್ದರು. ಆದರೆ, ಈಚೆಗೆ ಜೀವನಾಂಶ ಕೊಡದೆ ನಿರ್ಲಕ್ಷಿಸಿದ್ದಕ್ಕೆ ಲೀಲಾವತಿ ಅವರು ಕೋರ್ಟ್‌ ಮೊರೆ ಹೋಗಿದ್ದಾರೆ.

ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ಚಂದ್ರಕಾಂತ ಅವರು ಜೀವನಾಂಶ ನೀಡಲು ಒಪ್ಪದ ಕಾರಣ ಜೈಲು ಶಿಕ್ಷೆಗೆ ಗುರಿಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.