ADVERTISEMENT

‘ಬಂಗಾರ ಪ್ರಶಸ್ತಿ’ ಪ್ರಕಟ: ಕಾಳೇಗೌಡ ನಾಗವಾರ ಸೇರಿ ಮೂವರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 19:35 IST
Last Updated 20 ಅಕ್ಟೋಬರ್ 2025, 19:35 IST
<div class="paragraphs"><p>ಕಾಳೇಗೌಡ ನಾಗವಾರ</p></div>

ಕಾಳೇಗೌಡ ನಾಗವಾರ

   

ಬೆಂಗಳೂರು: ಎಸ್‌. ಬಂಗಾರಪ್ಪ ವಿಚಾರ  ವೇದಿಕೆ ನೀಡುವ 2025ನೇ ಸಾಲಿನ ‘ಸಾಹಿತ್ಯ ಬಂಗಾರ’ ಪ್ರಶಸ್ತಿಗೆ ಮೈಸೂರಿನ ಕಾಳೇಗೌಡ ನಾಗವಾರ, ‘ಜಾನಪದ ಬಂಗಾರ’ ಪ್ರಶಸ್ತಿಗೆ ಬೆಳಗಾವಿಯ ರಾಧಾ ಬಾಯಿ ಮಾದರ, ‘ರಂಗ ಬಂಗಾರ’ ಪ್ರಶಸ್ತಿಗೆ ಕಲಬುರಗಿಯ ಜೇವರ್ಗಿ ರಾಜಣ್ಣ ಹಾಗೂ ‘ಸೇವಾ ಬಂಗಾರ’ ಪ್ರಶಸ್ತಿಗೆ ಬೆಂಗಳೂರಿನ ಶ್ರೀ ತೋಟದಪ್ಪ ಧರ್ಮಸಂಸ್ಥೆ ಆಯ್ಕೆಯಾಗಿದೆ. 

ಪ್ರಶಸ್ತಿಯು ತಲಾ ₹1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. 

ADVERTISEMENT

ಎಸ್. ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಬಂಗಾರಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಅಕ್ಟೋಬರ್‌ 26ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆಯುವ ‘ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವೇದಿಕೆಯ ಪ್ರಧಾನ ಸಂಚಾಲಕ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.