ಬೀದರ್: ಸಹಕಾರ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ 10 ಮಂದಿಗೆ ಪ್ರಸಕ್ತ ಸಾಲಿನ ಸಹಕಾರ ರತ್ನ ಪ್ರಶಸ್ತಿಯನ್ನು ಗುರುವಾರ ಇಲ್ಲಿ ನಡೆದರಾಜ್ಯ ಮಟ್ಟದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತರು
ಕಲಬುರ್ಗಿ ವಿಭಾಗ: ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ (ಮರಣೋತ್ತರ) ಹಾಗೂ ಬೀದರ್ನ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಮಹಮ್ಮದ್ ಸಲೀಮೊದ್ದಿನ್.
ಬೆಂಗಳೂರು ನಗರ: ಬಿ.ಎನ್. ವೆಂಕಟಾಚಲಯ್ಯ.
ಬೆಂಗಳೂರು ವಿಭಾಗ: ಅನ್ನಪೂರ್ಣಮ್ಮ ವೆಂಕಟಪ್ಪ ತುಮಕೂರು ಮತ್ತು ಕೆ.ಶ್ರೀನಿವಾಸೇಗೌಡ ಕೋಲಾರ.
ಮೈಸೂರು ವಿಭಾಗ: ಸರಳಾ ಕಾಂಚನ್, ಉಡುಪಿ, ಕೃಷ್ಣರಾಜ ಸರಳಾಯ, ಉಡುಪಿ ಹಾಗೂ ಡಾ.ಮುನಿವೆಂಕಟಗೌಡ, ಹಾಸನ.
ಬೆಳಗಾವಿ ವಿಭಾಗ: ಜಿ.ಟಿ.ಹೆಗಡೆ ತಟ್ಟೀಸರ್, ಸಿರ್ಸಿ, ಉತ್ತರ ಕನ್ನಡ.
ನಿವೃತ್ತ ಇಲಾಖಾಧಿಕಾರಿ ವಿಭಾಗ: ಎಸ್.ಎಂ.ಕಲೂತಿ, ಬೆಳಗಾವಿ ವಿಭಾಗ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.