ADVERTISEMENT

ಶ್ರೀಗಂಧ ಮಂಡಳಿ ಸ್ಥಾಪನೆ: ಗೋಯಲ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 15:51 IST
Last Updated 16 ಡಿಸೆಂಬರ್ 2025, 15:51 IST
ಪೀಯೂಷ್‌ ಗೋಯಲ್
ಪೀಯೂಷ್‌ ಗೋಯಲ್   

ನವದೆಹಲಿ: ಕರ್ನಾಟಕದಲ್ಲಿ ಶ್ರೀಗಂಧ ಬೆಳೆಗಾರರ ಹಿತರಕ್ಷಣೆಗೆ ಶ್ರೀಗಂಧ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪೀಯೂಷ್‌ ಗೋಯಲ್ ಅವರಿಗೆ ಮನವಿ ಸಲ್ಲಿಸಿದರು. 

ರಾಜ್ಯವು ಶ್ರೀಗಂಧದ ನಾಡು ಎಂದು ಪ್ರಖ್ಯಾತವಾಗಿದೆ. ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಶ್ರೀಗಂಧದ ಪೈಕಿ ರಾಜ್ಯದ ಪಾಲು ಶೇ 65ರಷ್ಟಿದೆ. ಪ್ರಸ್ತುತ ಶ್ರೀಗಂಧ ಬೆಳೆ ನಿರ್ವಹಣೆ, ಕಟಾವು ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಪ್ರತ್ಯೇಕ ನೀತಿ ಹೊಂದಿದೆ. ಇದರಿಂದಾಗಿ, ಬೆಳೆಗಾರರು ಅರಣ್ಯ ಹಾಗೂ ಗೃಹ ಇಲಾಖೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಕಾಫಿ ಮಂಡಳಿಯ ಮಾದರಿಯಲ್ಲೇ ಶ್ರೀಗಂಧ ಮಂಡಳಿ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT