ರಾಮದುರ್ಗ (ಬೆಳಗಾವಿ ಜಿಲ್ಲೆ): ವಾಟ್ಸ್ಆ್ಯಪ್ನಲ್ಲಿ ದೇಶ ವಿರೋಧಿಯಾದ ಹಾಗೂ ಪಾಕಿಸ್ತಾನ ಪರವಾದ ಸಂದೇಶ ಹಾಕಿದ ಆರೋಪದ ಮೇಲೆ ಮೂವರನ್ನು ಶನಿವಾರ ಬಂಧಿಸಲಾಗಿದೆ.
ರಾಮದುರ್ಗ ತಾಲ್ಲೂಕಿನ ಎಂ. ಚಂದರಗಿಯ ಹುಸೇನಸಾಬ್ ಕಾಸಿಂಸಾಬ್ ನದಾಫ, ಕಟಕೋಳದ ಕಲ್ಮೇಶ್ವರ ಫಕೀರಪ್ಪ ಹಲಗಿ, ಉದಯ
ಕುಮಾರ ಕಳಸನ್ನವರ ಬಂಧಿತರು. ಈ ಸಂಬಂಧ ಒಟ್ಟು ಆರು ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಕಟಕೋಳ ಠಾಣೆ ಪೊಲೀಸರು, ಉಳಿದ ಮೂವರಿಗಾಗಿ ಶೋಧ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.