ADVERTISEMENT

ಹಿರಿಯ ಭಾಷಾವಿಜ್ಞಾನಿ ಡಾ. ಯು.ಪಿ. ಉಪಾಧ್ಯಾಯ ನಿಧನ 

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 6:47 IST
Last Updated 18 ಜುಲೈ 2020, 6:47 IST
ಡಾ.ಯು.ಪಿ. ಉಪಾಧ್ಯಾಯ
ಡಾ.ಯು.ಪಿ. ಉಪಾಧ್ಯಾಯ   

ಉಡುಪಿ: ಹಿರಿಯ ಭಾಷಾ ವಿಜ್ಞಾನಿ ಹಾಗೂ ತುಳು ನಿಘಂಟು ತಜ್ಞರಾದ ಡಾ.ಯು.ಪಿ. ಉಪಾಧ್ಯಾಯ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಕಾಪುವಿನವರಾದ ಉಪಾಧ್ಯಾಯ ಅವರು, ತುಳು ಭಾಷಾ ಬೃಹತ್ ನಿಘಂಟು ರಚಿಸುವಲ್ಲಿ ಹಾಗೂ ತುಳು ಭಾಷಾ ಅಧ್ಯಯನಕ್ಕೆ ಬಹಳ ಶ್ರಮಿಸಿದ್ದರು.

ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವು ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ. ಡಾ.ಯು.ಪಿ. ಉಪಾಧ್ಯಾಯರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.