ಗದಗ: ‘ಜನರಿಗೆ ಕೈ ಕೊಡುವ ಕೆಲಸದಲ್ಲಿ ಕಾಂಗ್ರೆಸ್ನವರು ಸಿದ್ಧಹಸ್ತರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
‘ಪ್ರಾರಂಭದಲ್ಲಿ ಬಡವರಿಗೆ 7 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದ್ದರು. ಐದು ವರ್ಷದಲ್ಲಿ ಮೂರು ವರ್ಷ 4 ಕೆ.ಜಿ., ಅಕ್ಕಿ ಕೊಟ್ಟರು. ಚುನಾವಣೆಗೆ ಸ್ವಲ್ಪ ದಿನ ಇರುವಾಗ 7 ಕೆ.ಜಿ.ಗೆ ಹೆಚ್ಚಿಸಿದರು’ ಎಂದು ದೂರಿದರು.
‘ಕಾಂಗ್ರೆಸ್ನವರು ಮೊದಲು ಕೊಡ್ತಿವಿ ಅಂತಾರೆ, ನಂತರ ಕೊಡಿಸ್ತೀವಿ ಅಂತಾರೆ. ಇಂತಹ ಕಾಂಗ್ರೆಸ್ನವರಿಗೆ ಜನರು ಈ ಬಾರಿ ಸರಿಯಾದ ಜಾಗ ತೋರಿಸಬೇಕು’ ಎಂದು ಖಾರವಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.