ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅವ್ಯವಹಾರ, ಅಕ್ರಮ ತಡೆಯಲು ಹಾಗೂ ಮೌಲ್ಯಮಾಪನದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. 2020ರಲ್ಲಿ ನಡೆಯುವ ಪರೀಕ್ಷೆಗೆ ಈ ನಿಯಮಗಳು ಅನ್ವಯವಾಗಲಿವೆ.
‘ಹೊಸ ವ್ಯವಸ್ಥೆಯ ಪ್ರಕಾರ, ಪರೀಕ್ಷೆ ಮುಗಿಯುತ್ತಿದ್ದಂತೆಯೇ ಪ್ರತಿಯೊಂದು ಉತ್ತರಪತ್ರಿಕೆಯನ್ನು ಸ್ಕ್ಯಾನ್ ಮಾಡಿ, ಅದಕ್ಕೆ ಪ್ರತ್ಯೇಕವಾದ ತಾತ್ಕಾಲಿಕ ಸಂಖ್ಯೆಯೊಂದನ್ನು ನೀಡಲಾಗುವುದು. ಈ ತಾತ್ಕಾಲಿಕ ಸಂಖ್ಯೆಯನ್ನು ಒಎಂಆರ್ ಹಾಳೆ ಮತ್ತು ಉತ್ತರಪತ್ರಿಕೆಯ ಮೇಲೂ ನಮೂದಿಸಲಾಗುವುದು.
‘ಉತ್ತರಪತ್ರಿಕೆಯನ್ನು ಮೌಲ್ಯಮಾಪಕರಿಗೆ ನೀಡುವ ಮುನ್ನ ಅದರ ಮೊದಲ ಪುಟ (ಒಎಂಆರ್ ಶೀಟ್) ತೆಗೆದಿಡಲಾಗುವುದು. ಇದರಿಂದ ವಿದ್ಯಾರ್ಥಿಯ ಮಾಹಿತಿ ಲಭಿಸುವುದಿಲ್ಲ. ಮೌಲ್ಯಮಾಪನದ ಬಳಿಕ ಸಂಖ್ಯೆಯನ್ನು ಮರುತಾಳೆ ಮಾಡಿ, ಅಂಕಗಳನ್ನು ದಾಖಲಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.