ಬಂಟ್ವಾಳ: ಎರಡೂ ಕೈಗಳಿಲ್ಲದೇ ಕಾಲಿನಿಂದ ಪರೀಕ್ಷೆ ಬರೆದ ಬಂಟ್ವಾಳದ ಎಸ್.ವಿ.ಎಸ್. ಪ್ರೌಢಶಾಲೆಯ ಕೌಶಿಕ್ ಆಚಾರ್ಯ 625ಕ್ಕೆ 424 (ಶೇ 68) ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ.
ಯಾರ ಸಹಾಯವೂ ಇಲ್ಲದೇ ಕಾಲಿನಿಂದ ಪರೀಕ್ಷೆ ಬರೆದ ಕೌಶಿಕ್ ಸಾಧನೆಗೆ, ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದರು. ಕೌಶಿಕ್ ನಗರದ ಕಂಚಿಕಾರ ಪೇಟೆಯ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಪುತ್ರ. ವಾಣಿಜ್ಯ ವಿಷಯದಲ್ಲಿ ಪಿಯುಸಿ ಮಾಡುವ ಹಂಬಲ ವ್ಯಕ್ತಪಡಿಸಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.