ಬೆಂಗಳೂರು: ಸಪ್ತಪದಿ ಫೌಂಡೇಷನ್ ಟ್ರಸ್ಟ್ ಹಾಗೂ ಬ್ರಾಹ್ಮಣ ಸ್ವಯಂ ಸೇವಕ ಸಂಘದ ಸಹಯೋಗದಲ್ಲಿ ಇದೇ 9 ಮತ್ತು 10ರಂದು ರಾಜ್ಯಮಟ್ಟದ ಬ್ರಾಹ್ಮಣ ವಧು–ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಎನ್.ಆರ್.ಕಾಲೊನಿ ಬಸ್ ನಿಲ್ದಾಣದ ಎದುರು ಇರುವ ಡಾ.ಅಶ್ವಥ್ ಕಲಾ ಭವನದಲ್ಲಿ ನಿಗದಿತ ದಿನಗಳಂದು ಬೆಳಿಗ್ಗೆ 9ರಿಂದ ಸಮಾವೇಶ ಶುರುವಾಗಲಿದೆ.
‘ಸುಶಿಕ್ಷಿತ ವಧು–ವರರು, ವಿಚ್ಛೇದಿತರು, ವಿಧುರ–ವಿಧವೆಯರು ಹಾಗೂ ಅಂಗವಿಕಲರು ಇದರಲ್ಲಿ ಭಾಗವಹಿಸಬಹುದು. ಆಸಕ್ತರು ಇದೇ 8ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ 8217876335 ಅಥವಾ 9449425536.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.