ADVERTISEMENT

₹ 10 ಲಕ್ಷ ಲಂಚ: ಸರ್ವೇಯರ್ ಬಂಧಿಸಿದ ಎಸಿಬಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 11:02 IST
Last Updated 23 ಫೆಬ್ರುವರಿ 2019, 11:02 IST
ಸರ್ವೇಯರ್ ಬಸವರಾಜು
ಸರ್ವೇಯರ್ ಬಸವರಾಜು    

ಬೆಂಗಳೂರು:ನಗರದ ನಿವಾಸಿಯೊಬ್ಬರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು‌‌ ಮರು ಹಂಚಿಕೆ ಮತ್ತು ಮರು ಮಂಜೂರಾತಿ ಮಾಡಿಕೊಡಲು ₹10ಲಕ್ಷ ಲಂಚ ಪಡೆದಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಆರ್ ಆ್ಯಂಡ್ಆರ್ ವಿಭಾಗದ ಸರ್ವೇಯರ್ ಮತ್ತು ಅವರಿಗೆ
ಸಹಕಾರ ನೀಡಿದ್ದ ಮಧ್ಯವರ್ತಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.‌

ಆರೋಪಿ‌ ಸರ್ವೇಯರ್ ಬಸವರಾಜು ತಮ್ಮ ಮಧ್ಯವರ್ತಿ ಬಸವರಾಜ್ ಮೂಲಕ ₹ 5 ಲಕ್ಷ ನಗದು ಮತ್ತು ಉಳಿದ ₹ 5ಲಕ್ಷದ ಮೊತ್ತಕ್ಕೆ ಚೆಕ್ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಈ‌ ಚೆಕ್ ಅನ್ನು ಹಣ ತಲುಪಿಸಿದ 7 ದಿನಗಳಲ್ಲಿ ವಾಪಸ್‌‌‌ ಕೊಡುವುದಾಗಿಬಂಧಿತರು ಹೇಳಿದ್ದರು.

ADVERTISEMENT

ಎಸಿಬಿ‌ ಐಜಿ‌ ಚಂದ್ರಶೇಖರ್ ಮಾರ್ಗದರ್ಶನದಲ್ಲಿಆರೋಪಿಗಳನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.