ರಾಮನಗರ: ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಟಿ ಸೌಜನ್ಯಾ ಅಲಿಯಾಸ್ ಸವಿ ಮಾದಪ್ಪರ ತಂದೆ ಪ್ರಭು ಮಾದಪ್ಪ ಕುಂಬಳಗೋಡು ಠಾಣೆ ಪೊಲೀಸರಿಗೆ ಗುರುವಾರ ರಾತ್ರಿ ದೂರು ನೀಡಿದರು.
ಸೌಜನ್ಯಾ ಆಪ್ತ ಸಹಾಯಕ ಹಾಗೂ ನಟನೊಬ್ಬನ ವಿರುದ್ಧ ಅವರು ದೂರು ನೀಡಿದ್ದು, ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ಪ್ರಭು ಮಾದಪ್ಪ ' ಮಗಳು ಕಳೆದ ಐದು ವರ್ಷದಿಂದ ಬೆಂಗಳೂರಿನಲ್ಲಿದ್ದು, ಎರಡು ವರ್ಷದಿಂದ ಈ ಅಪಾರ್ಟ್ಮೆಂಟ್ನಲ್ಲಿ ಒಬ್ಬಳೇ ಇದ್ದಳು. ಕೆಲ ಕಾಲ ಗಗನಸಖಿಯಾಗಿಯೂ ಕೆಲಸ ಮಾಡಿದ್ದಳು. ಚೌಕಟ್ಟು, ಫನ್, ಅರ್ಜುನ್ ಗೌಡ ಚಿತ್ರಗಳಲ್ಲಿ ಆಕೆ ನಟಿಸಿದ್ದಳು. ಬೆಳಿಗ್ಗೆಯಷ್ಟೇ ಮೊಬೈಲ್ ಕರೆ ಮಾಡಿ, ಕೊಡಗಿಗೆ ಬರುವುದಾಗಿ ಹೇಳಿದ್ದಳು. ಯಾರೋ ಕಿರುಕುಳ ನೀಡಿ ಅವಳ ಸಾವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.
ಕುಶಾಲನಗರ ತಾಲ್ಲೂಕಿನ ಶುಂಠಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಸುವುದಾಗಿ ಅವರು ತಿಳಿಸಿದರು.
ಹಿಂದೆಯೇ ಸಿದ್ಧವಾಗಿತ್ತ ಡೆಟ್ನೋಟ್: ಸೌಜನ್ಯಾ ಬಳಿ ದೊರಕಿದ ಡೆಟ್ನೋಟ್ ಮೂರ್ನಾಲ್ಕು ದಿನದ ಹಿಂದೆಯೇ ಬರೆದಿದ್ದು ಎನ್ನಲಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.